ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಶಬರಿ‌ಮಲೆ ಭಕ್ತರಿಗಾಗಿ ಹಿಡಿ ಅಕ್ಕಿ ಸಂಗ್ರಹ ಅಭಿಯಾನ.. - Etv Bharat Kannada

ಶಬರಿಮಲೆಗೆ ತೆರಳುವ ಭಕ್ತರಿಗಾಗಿ ಹಿಡಿ ಅಕ್ಕಿ ಸಂಗ್ರಹ ಅಭಿಯಾನಕ್ಕೆ ಇಂದು ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಚಾಲನೆ ನೀಡಿದರು.

kn_smg_01
ಶಬರಿ‌ಮಲೆ ಭಕ್ತರಿಗಾಗಿ ಹಿಡಿ ಅಕ್ಕಿ ಸಂಗ್ರಹ ಅಭಿಯಾನ

By

Published : Nov 16, 2022, 6:16 PM IST

Updated : Nov 19, 2022, 4:27 PM IST

ಶಿವಮೊಗ್ಗ: ಶಬರಿಮಲೆಗೆ ಹೋಗುವ ಭಕ್ತರಿಗಾಗಿ ಪ್ರಸಾದ ಒದಗಿಸುವ ದೃಷ್ಟಿಯಿಂದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ನಗರದಲ್ಲಿ ಮುಷ್ಠಿ ಅಕ್ಕಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಯಿತು. ಶಬರಿ ಮಲೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯದ ಭಕ್ತರು ಹೋಗುತ್ತಾರೆ. ಇವರಿಗೆ ಅನುಕೂಲವಾಗುವಂತೆ ಅನ್ನ ದಾಸೋಹ ಮಾಡಲು ಅಕ್ಕಿ ಸಂಗ್ರಹ ಮಾಡಲಾಗುತ್ತಿದೆ.

ಇಂದು ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಮುಷ್ಟಿ ಅಕ್ಕಿ ಸಂಗ್ರಹ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಅಯ್ಯಪ್ಪ ಅನ್ನ ದಾಸೋಹದ ರಾಷ್ಟ್ರೀಯ ಸದಸ್ಯರಾದ ಕೆ.ಈ. ಕಾಂತೇಶ್ ಹಾಗೂ ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸಮಿತಿಯವರು ಜೊತೆ ಸೇರಿ ಗಣಪತಿಗೆ ಪೂಜೆ ಸಲ್ಲಿಸಿದರು.

ನಂತರ ವಾಹನದ ಜೊತೆ ಸಾಗಿದ ಈಶ್ವರಪ್ಪ, ಕಾಂತೇಶ್ ಹಾಗೂ ಸೇವಾ ಸಮಾಜದವರು ಮನೆ ಮನೆಗೆ ತೆರಳಿ ಮುಷ್ಡಿ ಅಕ್ಕಿ ಸಂಗ್ರಹ ಮಾಡಿದರು. ಸಮಿತಿಯವರು ತಮ್ಮ ಮನೆ ಬಳಿ ಬರುತ್ತಿದ್ದಂತೆಯೇ ಭಕ್ತರು ತಮ್ಮ ಮನೆಯ ಅಕ್ಕಿಯನ್ನು ತಂದು ನೀಡಿದರು. ಈ ವೇಳೆ ಅಭಿಯಾನಕ್ಕೆ ಗಾಂಧಿ ಬಜಾರ ವ್ಯಾಪಾರಿಗಳ ಸಂಘದವರು ಸುಮಾರು 30 ಚೀಲ ಅಕ್ಕಿ‌ ನೀಡಿದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದವರು ಕರೆ ನೀಡಿದ ಮೇರೆಗೆ ಅನೇಕ ಜನ ಹತ್ತಾರು ಚೀಲ ಅಕ್ಕಿ ನೀಡಿದ್ದು, ಈಗಾಗಲೇ ಒಂದು‌ ಲೋಡ್ ಅಕ್ಕಿ ಸಂಗ್ರಹವಾಗಿದೆ. ಅಕ್ಕಿ ಜೊತೆ ಬೇಳೆಗಳನ್ನು ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ನಾಲ್ಕೈದು ದಿನ ಸಂಚಾರ ಮಾಡಿ ಅಕ್ಕಿಯನ್ನು ಶಬರಿಮಲೆಗೆ ಕಳುಹಿಸಿಕೊಡಲಾಗುವುದು ಎಂದು ಅನ್ನ ದಾಸೋಹದ ರಾಷ್ಟ್ರೀಯ ಸದಸ್ಯ ಕೆ.ಈ. ಕಾಂತೇಶ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಶಬರಿ‌ಮಲೆ ಭಕ್ತರಿಗಾಗಿ ಹಿಡಿ ಅಕ್ಕಿ ಸಂಗ್ರಹ ಅಭಿಯಾನ

ಶಬರಿ ಮಲೆಗೆ ಹೋಗುವ ಭಕ್ತರು ದೇವರ ದರ್ಶನಕ್ಕೂ ಮೊದಲು ಹಾಗೂ ನಂತರ ಪ್ರಸಾದಕ್ಕೆ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದರಿಂದ ನಾವು ಈಗ ಶಬರಿಮಲೆಯ ಮೂರು ಕಡೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಿದ್ದೇವೆ. ಅಲ್ಲದೆ ಸ್ವಚ್ಛ ಶಬರಿಮಲೆ ಮಾಡಲು ಮುಂದಾಗಿದ್ದೇವೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ರಾಜ್ಯಾಧ್ಯಕ್ಷ ಜಯರಾಮ್ ಅವರು ಮಾಹಿತಿ ನೀಡಿದ್ದಾರೆ.

ಮುಷ್ಟಿ ಅಕ್ಕಿ ಸಂಗ್ರಹಕ್ಕೆ ಶಿವಮೊಗ್ಗ ನಗರದ 33 ವಾರ್ಡ್​ಗಳಲ್ಲಿ ಮೂರು ವಾರ್ಡ್​ಗೆ ಒಂದರಂತೆ ಶಕ್ತಿ ಕೇಂದ್ರ ಮಾಡಿದ್ದು, ಶಕ್ತಿಕೇಂದ್ರ ಒಂದಕ್ಕೆ ಮುಷ್ಡಿ ಅಕ್ಕಿ ಸಂಗ್ರಹಕ್ಕೆ ಒಂದು ವಾಹನ ಬಿಡುತ್ತಿದ್ದೇವೆ. ಶಬರಿಮಲೆಗೆ ಮಾಲೆ ಹಾಕಿಕೊಂಡು ಹೋಗುವ ಮಾಲಾಧಾರಿಗಳ ಮನೆಯವರು ಅವರ ಜೊತೆ ಅಕ್ಕಿಯನ್ನು ಕಳುಹಿಸುತ್ತಾರೆ. ಆದರೆ ಶಬರಿ ಮಲೆಗೆ ಹೋಗದೆ ಇರುವವರು ಅಕ್ಕಿ ಕಳುಹಿಸಬೇಕೆಂಬ ಆಸೆ ಇರುತ್ತದೆ. ಇದರಿಂದ ನಾವು ಪ್ರತಿ ಮನೆಯಿಂದ ಅಕ್ಕಿ ಸಂಗ್ರಹಿಸಿ ಶಬರಿಮಲೆಗೆ ಕಳುಹಿಸುತ್ತಿದ್ದೇವೆ. ಇದರಿಂದ ಎಲ್ಲರಿಗೂ ಅಯ್ಯಪ್ಪ ಒಳಿತನ್ನು ಮಾಡಿ ಸುಖ ಶಾಂತಿಯನ್ನು ನೀಡುತ್ತಾನೆ ಎಂದು ಶಿವಮೊಗ್ಗ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಅಧ್ಯಕ್ಷ ಸಂತೋಷ್ ಹೇಳಿದರು.

ಇದನ್ನೂ ಓದಿ:ಕ್ರೀಡಾಕೂಟದ ವೇಳೆ ಅಜಾನ್​ ನೃತ್ಯ ಆರೋಪ..ಉಡುಪಿಯಲ್ಲಿ ಪ್ರತಿಭಟನೆ

Last Updated : Nov 19, 2022, 4:27 PM IST

ABOUT THE AUTHOR

...view details