ಕರ್ನಾಟಕ

karnataka

By

Published : Oct 3, 2020, 5:42 AM IST

ETV Bharat / state

ಲಾಕ್​ಡೌನ್​ನಿಂದ ಸ್ಥಗಿತವಾಗಿದ್ದ ಹೆಗ್ಗೋಡಿನ ಚರಕ‌ ಮಹಿಳಾ ಸಂಘಕ್ಕೆ ಮರುಚಾಲನೆ

ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೆಗ್ಗೋಡಿನ ಚರಕ ಮಹಿಳಾ ವಿವಿದ್ಧೋದೇಶ ಸಹಕಾರ ಸಂಘಕ್ಕೆ ಗಾಂಧೀಜಿ ಜಯಂತಿ ದಿನ ಮರುಚಾಲನೆ ಸಿಕ್ಕಿದೆ.

Heggodu charaka women organization restarted
ಹೆಗ್ಗೋಡಿನ ಚರಕ‌ ಮಹಿಳಾ ಸಂಘಕ್ಕೆ ಮರುಚಾಲನೆ

ಶಿವಮೊಗ್ಗ: ಕೊರೊನಾ ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಮಹಿಳಾ ವಿವಿದ್ಧೋದೇಶ ಸಹಕಾರ ಸಂಘಕ್ಕೆ ಶುಕ್ರವಾರ ಮರುಚಾಲನೆ ಸಿಕ್ಕಿದೆ.

ಹೆಗ್ಗೋಡಿನ ಚರಕ‌ ಮಹಿಳಾ ಸಂಘಕ್ಕೆ ಮರುಚಾಲನೆ

ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೆ ಚರಕ ತುತ್ತಾಗಿತ್ತು. ಸರ್ಕಾರ ನೀಡಬೇಕಾದ ಹಣ ಬಾರದ ಕಾರಣ ಚರಕ ಸಂಘ ನಿಲ್ಲುವಂತಾಗಿತ್ತು. ಚರಕ ಸಂಘದ ಆವರಣದಲ್ಲಿ ಗಾಂಧಿ ಜಯಂತಿ, ಸಂಸ್ಥೆಯ ನೂತನ ಕಟ್ಡಡವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ಹೆಗ್ಗೋಡಿನ ಚರಕ‌ ಮಹಿಳಾ ಸಂಘಕ್ಕೆ ಮರುಚಾಲನೆ

ಈ ವೇಳೆ ಮಾತನಾಡಿದ ಸಂಸದರು, ಚರಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಾದ ಡಾ.ಉಪೇಂದ್ರ ಪ್ರತಾಪ್ ಸಿಂಗ್, ಚರಕದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ಪ್ರತಿಭಾ ಸೇರಿದಂತೆ ಚರಕದ ಕಾರ್ಯಕರ್ತೆಯರು ಹಾಜರಿದ್ದರು.

ABOUT THE AUTHOR

...view details