ಕರ್ನಾಟಕ

karnataka

ETV Bharat / state

ಕಾಗೋಡು ತಿಮ್ಮಪ್ಪ ಮನೆಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ - ಸಮಾಲೋಚನೆ - ಕಾಗೋಡು ತಿಮ್ಮಪ್ಪ ಲೇಟೆಸ್ಟ್ ನ್ಯೂಸ್

ರಾಜಕೀಯ ಜೀವನಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಪ್ರಧಾನಿ ಹೆಚ್​ ದೇವೇಗೌಡರು ಮಾದರಿ. ಇಂದು ಕಾಗೋಡು ತಿಮ್ಮಪ್ಪರಂತಹ ಹಿರಿಯ ಮುತ್ಸದ್ಧಿ ರಾಜಕಾರಣಿಗಳ ಅನುಭವವನ್ನು ಯುವಕರು ಪಡೆದುಕೊಳ್ಳಬೇಕು, ಅವರೂಬ್ಬ ಉತ್ತಮ ಸಂಸದೀಯ ಪಟು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಲಹೆ ನೀಡಿದರು.

h d revanna met kagodu timmappa at sagara
ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಕಾಗೋಡು ತಿಮ್ಮಪ್ಪನವರ ಮನೆಗೆ ದಿಢೀರ್ ಭೇಟಿ, ಸಮಲೋಚನೆ

By

Published : Feb 10, 2021, 7:12 AM IST

ಶಿವಮೊಗ್ಗ: ಮಾಜಿ ಸಚಿವ, ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಅವರು ಮಾಜಿ ಸಚಿವ, ‌ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪನವರ ಮನೆಗೆ ಮಂಗಳವಾರ ಭೇಟಿ ನೀಡಿ ಕೆಲಕಾಲ ಸಮಾಲೋಚನೆ ನಡೆಸಿದರು.

ಕಾಗೋಡು ತಿಮ್ಮಪ್ಪನವರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಸಾಗರದ ಗಾಂಧಿ ನಗರದ ಕಾಗೋಡು ತಿಮ್ಮಪ್ಪನವರ ಮನೆಗೆ ನಿನ್ನೆ ಸಂಜೆ ಭೇಟಿ ನೀಡಿದ್ದ ಹೆಚ್.ಡಿ. ರೇವಣ್ಣ, ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ, ನನ್ನ ಭೇಟಿಗೆ ರಾಜಕೀಯ ಬಣ್ಣ ಹಚ್ಚಬೇಡಿ. ನಾನು ಕಾಗೋಡು ತಿಮ್ಮಪ್ಪನವರ ಕುಶಲೋಪರಿ ವಿಚಾರಿಸಲು ಬಂದಿದ್ದೇನೆ ಎಂದರು.

ಹರಿಹರದಲ್ಲಿ ನಡೆದ ವಾಲ್ಮೀಕಿ ಸಮಾವೇಶ ಮುಗಿಸಿಕೊಂಡು ಶಿಕಾರಿಪುರಕ್ಕೆ ಬಂದಿದ್ದೆ. ನಮ್ಮ ದೇವಾಲಯದಲ್ಲಿ‌ ಕೆತ್ತನೆ ಕೆಲಸ ಮಾಡುತ್ತಿದ್ದ ಓರ್ವರು ನಿಧನರಾಗಿದ್ದರು. ಈ ಹಿನ್ನೆಲೆ, ಅವರ ಮನೆಗೆ ಹೋಗಿದ್ದೆ. ಅಲ್ಲಿಂದ ಕಾಗೋಡು ತಿಮ್ಮಪ್ಪನವರ ಮನೆಗೆ ಬಂದಿದ್ದೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ:ಪಕ್ಷ ಬಲವರ್ಧನೆಗೆ ದಳ ಪತಿಗಳು ಸಜ್ಜು: ಬೆಂಗಳೂರಲ್ಲಿ ಫೆ.14ರಂದು ಬೃಹತ್ ಸಮಾವೇಶ

ರಾಜಕೀಯ ಜೀವನಕ್ಕೆ ಕಾಗೋಡು ತಿಮ್ಮಪ್ಪ ಮತ್ತು ದೇವೇಗೌಡರು ಮಾದರಿ. ಇಂದು ಕಾಗೋಡು ತಿಮ್ಮಪ್ಪರಂತಹ ಹಿರಿಯ ಮುತ್ಸದ್ಧಿ ರಾಜಕಾರಣಿಗಳ ಅನುಭವವನ್ನು ಯುವಕರು ಪಡೆದುಕೊಳ್ಳಬೇಕು, ಅವರೂಬ್ಬ ಉತ್ತಮ ಸಂಸದೀಯ ಪಟು ಎಂದು ಹೇಳಿದರು.

ಇದೇ ವೇಳೆ ಇತ್ತೀಚಿನ ರಾಜಕೀಯ ನನಗೆ ಬೇಸರ ತಂದಿದೆ. ಕೆಲಸಕ್ಕಿಂತ ಬಣ್ಣಕ್ಕೆ ಬೆಲೆಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details