ಶಿವಮೊಗ್ಗ: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದ್ದಕ್ಕೆ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು ಎಂದು ತಂಡದ ಮುಖ್ಯಸ್ಥ ಎಸ್.ಪಿ.ದಿನೇಶ್ ಹೇಳಿದರು.
ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು : ಅಭಿನಂದನೆ ಸಲ್ಲಿಸಿದ ಎಸ್.ಪಿ.ದಿನೇಶ್ - ಶಿವಮೊಗ್ಗ ಸುದ್ದಿ
ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದ್ದಕ್ಕೆ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು ಎಂದು ತಂಡದ ಮುಖ್ಯಸ್ಥ ಎಸ್.ಪಿ.ದಿನೇಶ್ ಹೇಳಿದರು.
![ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು : ಅಭಿನಂದನೆ ಸಲ್ಲಿಸಿದ ಎಸ್.ಪಿ.ದಿನೇಶ್ Graduate Teachers Field Election](https://etvbharatimages.akamaized.net/etvbharat/prod-images/768-512-6029339-thumbnail-3x2-bngh.jpg)
ಸುದ್ದಿಗೊಷ್ಠಿಯಲ್ಲಿ ಮಾತನಾಡಿ, 13 ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ 9 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅದರಲ್ಲಿ 4 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ತಮ್ಮ ತಂಡದ ಯು.ಚಂದ್ರಶೇಖರಪ್ಪ, ಟಿ.ಜಗದೀಶ್, ಡಿ.ಎಸ್.ಭುವನೇಶ್ವರಿ, ಎಸ್.ಮಮತಾ ಅವರು ಆಯ್ಕೆಯಾಗಿದ್ದಾರೆ ಎಂದರು.
ಎಲ್ಲ 13 ಸ್ಥಾನಗಳನ್ನು ನಮ್ಮ ತಂಡ ಪಡೆದಿದೆ. ಮುಂದಿನ ದಿನಗಳಲ್ಲಿ ಪದವೀಧರರ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗುತ್ತೇವೆ. ಶಿವಮೊಗ್ಗ ನಗರದ ವಿವಿದೆಡೆ ಹೊಸ ಶಾಖೆಗಳನ್ನು ಆರಂಭಿಸುತ್ತೇವೆ, ನವುಲೆಯಲ್ಲಿ ನಿವೇಶನ ಪಡೆದಿದ್ದು, ಅಲ್ಲಿ ಸಂಘದಿಂದಲೇ ಶಿಕ್ಷಣ ಸಂಸ್ಥೆಯನ್ನು ಆರಂಭಿಸುತ್ತೇವೆ. ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡುವ ಉದ್ದೇಶವೂ ತಮಗಿದೆ. ಒಟ್ಟಾರೆ ಸಂಘದ ಅಭಿವೃದ್ದಿಗಾಗಿ ಸಂಘಟನೆಯ ಮೂಲಕ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ತಮ್ಮನ್ನು ಗೆಲ್ಲಿಸಿದ ಎಲ್ಲರಿಗೂ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ನಮಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.