ಶಿವಮೊಗ್ಗ:ಪದ್ಮಶ್ರೀ ಪುರಸ್ಕೃತ ಖ್ಯಾತ ಗಮನ ಗಾಯಕ ಹೊಸಹಳ್ಳಿಯ ಕೇಶವಮೂರ್ತಿ(89)ಯವರು ಅನಾರೋಗ್ಯದಿಂದ ಶಿವಮೊಗ್ಗ ತಾಲೂಕು ಹೊಸಹಳ್ಳಿಯ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಗಮಕ ಗಾಯಕ ಹೊಸಹಳ್ಳಿ ಕೇಶವಮೂರ್ತಿ ವಿಧಿವಶ - etv bharat karnataka
ಪದ್ಮಶ್ರೀ ಪುರಸ್ಕೃತ ಖ್ಯಾತ ಗಮನ ಗಾಯಕ ಹೊಸಹಳ್ಳಿಯ ಕೇಶವಮೂರ್ತಿ(89)ಅವರು ಅನಾರೋಗ್ಯದಿಂದ ಶಿವಮೊಗ್ಗ ತಾಲೂಕು ಹೊಸಹಳ್ಳಿಯ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಇಹಲೋಕ ತ್ಯಜಿಸಿದ ಪದ್ಮಶ್ರೀ ಪುರಸ್ಕೃತ ಗಮಕ ಗಾಯಕ ಹೊಸಹಳ್ಳಿ ಕೇಶವಮೂರ್ತಿ
ಗಮಕ ಕಲೆಗೆ ದೇಶದಲ್ಲೇ ಮೊದಲ ಬಾರಿಗೆ ಪದ್ಮಶ್ರೀ ಪುರಸ್ಕೃತರಾದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಇದೇ ವರ್ಷ ಕೇಶವ ಮೂರ್ತಿಯವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ:ಮಲೆನಾಡು, ಕರಾವಳಿ ಭಾಗಗಳಲ್ಲಿ ಎಲೆಚುಕ್ಕಿ ರೋಗ : ವಿಧಾನಸಭೆಯಲ್ಲಿ ಗಂಭೀರ ಚರ್ಚೆ
TAGGED:
padamasri keshavamurthydeath