ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಅಮೃತ ನೋನಿ ತಂಡದಿಂದ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್​​​ ಸೇವೆ - shimogga latest news

ಆ್ಯಂಬುಲೆನ್ಸ್​​ ನಲ್ಲಿ ಆಕ್ಸಿಜನ್ ಕಿಟ್ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಇದನ್ನು ಸೋಂಕಿತರು ಬಳಸಬಹುದಾಗಿದೆ. ಈ ಆ್ಯಂಬುಲೆನ್ಸ್ ಅನ್ನು ಅಮೃತ‌ ನೋನಿಯ ಮುಖ್ಯಸ್ಥ ಶ್ರೀನಿವಾಸ್ ಸೇವಾ ಭಾರತಿಯ ಕೋವಿಡ್ ಸುರಕ್ಷಾ ಪಡೆಗೆ ಹಸ್ತಾಂತರ ಮಾಡಿದರು.

free-ambulance-service
ಉಚಿತ ಆಂಬ್ಯುಲೆನ್ಸ್ ಸೇವೆ

By

Published : May 8, 2021, 3:32 PM IST

ಶಿವಮೊಗ್ಗ:ವ್ಯಾಲ್ಯೂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಅಮೃತ ನೋನಿಯಿಂದ, ಕೋವಿಡ್ ರೋಗಿಗಳಿಗೆ ಉಚಿತ ಆ್ಯಂಬುಲೆನ್ಸ್​​ ಸೇವೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.

ಉಚಿತ ಆಂಬ್ಯುಲೆನ್ಸ್ ಸೇವೆ

ಶಿವಮೊಗ್ಗದಲ್ಲಿ ಕೋವಿಡ್ ಸೋಂಕಿತರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಅಮೃತ ನೋನಿ ತಂಡ ಆ್ಯಂಬುಲೆನ್ಸ್​​ ಒದಗಿಸಿದೆ. ಈ ಆ್ಯಂಬುಲೆನ್ಸ್​ ಸೇವೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ನಗರದ ಚೇಬರ್ ಆಫ್ ಕಾಮರ್ಸ್ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಆ್ಯಂಬುಲೆನ್ಸ್​​ನಲ್ಲಿ ಆಕ್ಸಿಜನ್ ಕಿಟ್ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿದೆ. ಇದನ್ನು ಸೋಂಕಿತರು ಬಳಸಬಹುದಾಗಿದೆ. ಈ ಆ್ಯಂಬುಲೆನ್ಸ್ ಅನ್ನು ಅಮೃತ‌ ನೋನಿಯ ಮುಖ್ಯಸ್ಥ ಶ್ರೀನಿವಾಸ್ ಸೇವಾ ಭಾರತಿಯ ಕೋವಿಡ್ ಸುರಕ್ಷಾ ಪಡೆಗೆ ಹಸ್ತಾಂತರ ಮಾಡಿದರು. ಈ ವೇಳೆ ಜಿ.ಪಂ ಸದಸ್ಯ ಕೆ.ಈ.ಕಾಂತೇಶ್, ಸಣ್ಣ ಕೈಗಾರಿಕ ನಿಗಮದ ಎಸ್.ದತ್ತಾತ್ತ್ರಿ ಸೇರಿದಂತೆ ಅಮೃತ ನೋನಿ ತಂಡ ಹಾಜರಿತ್ತು.

ಕೋವಿಡ್ ಕಾಲ್ ಸೆಂಟರ್ ಗೆ ಭೇಟಿ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ:

ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಗರದ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಆವರಣದಲ್ಲಿ ಐಎಂಎ ಮತ್ತು ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷತಾ ಪಡೆಯ ವತಿಯಿಂದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ತೆರೆದಿರುವ ಕಾಲ್ ಸೆಂಟರ್​​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿದಿನ ಯಾವೆಲ್ಲ ಸಮಸ್ಯೆಗಳ ಕುರಿತು ಕಾಲ್​​​ಗಳು ಬರುತ್ತಿದ್ದು, ಅವರ ಸಮಸ್ಯೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡಲಾಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಆರ್​​ಎಸ್​​ಎಸ್​ ಮುಖಂಡ ಪಟ್ಟಭಿರಾಮ್, ಸೇರಿದಂತೆ ಕೋವಿಡ್ ಪಡೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ABOUT THE AUTHOR

...view details