ಕರ್ನಾಟಕ

karnataka

ETV Bharat / state

ಲಾರಿ ಕೊಡಿಸುವುದಾಗಿ 5 ಲಕ್ಷ ರೂ. ಪಂಗನಾಮ ಹಾಕಿದವ ಅಂದರ್​

ಲಾರಿ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

By

Published : Jun 19, 2021, 1:14 PM IST

fraudster arrested in Shimoga
ವಂಚನೆ ಆರೋಪಿ ಬಂಧನ

ಶಿವಮೊಗ್ಗ : ಕಡಿಮೆ ಬೆಲೆಗೆ ಒಳ್ಳೆಯ ಕಂಡಿಷನ್ ಲಾರಿ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂಪಾಯಿ ಪಂಗನಾಮ ಹಾಕಿದವನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

ಜೂನ್ 12 ರಂದು ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಸುರೇಶ್ ಎಂಬವರಿಗೆ, ನಮ್ಮ ಬಳಿ ಒಳ್ಳೆಯ ಕಂಡಿಷನ್ ಇರುವ ಲಾರಿ ಇದೆ. ಕಡಿಮೆ ದರಕ್ಕೆ ನಿಮಗೆ ನೀಡುತ್ತೇವೆ ಎಂದು ರಾಜೇಂದ್ರ ಎಂಬಾತ 5 ಲಕ್ಷ ರೂ. ಹಣ ಪಡೆದಿದ್ದ. ಹೊಳೆಹೊನ್ನೂರು ಗ್ರಾಮಕ್ಕೆ ಕರೆಯಿಸಿದ ರಾಜೇಂದ್ರ, ಸುರೇಶ್ ಅವರಿಂದ ಹಣ ಪಡೆದು ಲಾರಿ ಕೊಡಿಸದೆ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.

ಈ ಕುರಿತು‌ ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಪೊಲೀಸರು, ಆರೋಪಿ ಭದ್ರಾವತಿಯ ವೀರಾಪುರದ ರಾಜೇಂದ್ರನನ್ನು ಬಂಧಿಸಿದ್ದಾರೆ. ಆರೋಪಿಯಿಂದ 5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಓದಿ : ಬೆಳಗಾವಿ ಚಿನ್ನ ಕಳ್ಳತನ ಪ್ರಕರಣ: ಮೂರು ಕೇಸ್​​ ದಾಖಲು - ತನಿಖೆ ಚುರುಕು

ABOUT THE AUTHOR

...view details