ಕರ್ನಾಟಕ

karnataka

ETV Bharat / state

ವಿಷ ಆಹಾರ ಸೇವನೆ ಗ್ರಾಮಸ್ಥರಿಗೆ ಅನಾರೋಗ್ಯ: ಹೆಚ್ಚು ಮಕ್ಕಳು ಅಸ್ವಸ್ಥ - ETV Bharath Kannada news

ವಿಷ ಆಹಾರ ಸೇವನೆ ಹಲವರಿಗೆ ಅನಾರೋಗ್ಯ - ಅಯ್ಯಪ್ಪ ಸ್ವಾಮಿ ಪೂಜೆಯ ಪ್ರಸಾದ ಸೇವನೆ ಮಾಡಿದ್ದ ಜನ - ಯಾವುದೇ ಅಪಾಯ ಇಲ್ಲ ಎಂದು ವೈದ್ಯಾಧಿಕಾರಿ ಭರವಸೆ.

food poison many villagers unhealthy  in Shivamogga
ವಿಷ ಆಹಾರ ಸೇವನೆ ಗ್ರಾಮಸ್ಥರಿಗೆ ಅನಾರೋಗ್ಯ

By

Published : Dec 27, 2022, 11:28 AM IST

ವಿಷ ಆಹಾರ ಸೇವನೆ ಗ್ರಾಮಸ್ಥರ ಅನಾರೋಗ್ಯದಲ್ಲಿ ಏರುಪೇರು

ಶಿವಮೊಗ್ಗ: ಆನಂದಪುರಂ ಗ್ರಾಮದಲ್ಲಿ ವಿಷಾಹಾರ ಸೇವನೆಯಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಲ್ಲಿ ವಾಂತಿ - ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ ಇಲ್ಲಿನ ಅಯ್ಯಪ್ಪ ಸ್ವಾಮಿ ಪೂಜೆಯ ವೇಳೆ ಪ್ರಸಾದ ಸೇವನೆ ಮಾಡಿದವರಲ್ಲಿ ವಾಂತಿ ಕಂಡು ಬಂದಿದೆ. ಇದರಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.

ಇಂದು ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಆನಂದಪುರಂನ ಆರೋಗ್ಯ ಕೇಂದ್ರಕ್ಕೆ ಬಂದು ವೈದ್ಯರ ಬಳಿ ತಪಾಸಣೆ ನಡೆಸಿಕೊಂಡಿದ್ದಾರೆ. ನಂತರ ವಯಸ್ಕರು ಸಹ ಬಂದು ವೈದ್ಯರ ಬಳಿ ತೋರಿಸಿಕೊಂಡು ಹೋಗಿದ್ದಾರೆ. ಕೆಲವರಿ ಗ್ಲೋಕೊಸ್ ಹಾಕಿಸಿಕೊಂಡು ಹೋಗಿದ್ದಾರೆ.

ಆದರೆ, ಯಾರಿಗೂ ಸಹ ಯಾವುದೇ ರೀತಿಯ ಅಪಾಯವಾಗಿಲ್ಲ, ಎಲ್ಲರೂ ಸಹ ಆರೋಗ್ಯವಾಗಿದ್ದು, ಎಲ್ಲೂರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾಂತೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಹಾಲು ಸೇವಿಸಿದ್ದ ತಾಯಿ - ಮಕ್ಕಳು ಅಸ್ವಸ್ಥ.. ಅಕ್ಕ- ತಮ್ಮ ಸಾವು, ಅಮ್ಮನ ಸ್ಥಿತಿ ಗಂಭೀರ!

ABOUT THE AUTHOR

...view details