ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಯುವಕನ ಮೇಲೆ ಹಲ್ಲೆ ಪ್ರಕರಣ, ಐವರ ಬಂಧನ - ಮಧು ಮೇಲೆ ನಡೆಸಿದ್ದ ಹಲ್ಲೆ ಪ್ರಕರಣ

ನಿನ್ನೆ ಶಿವಮೊಗ್ಗದ ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧು ಎಂಬ ಯುವಕ ಹೂವನ್ನು ಮನೆಯೊಂದಕ್ಕೆ ನೀಡಿ ವಾಪಸ್ ಆಗುವಾಗ ಆರು ಜನರು ಮೂರು ಬೈಕ್‌ಗಳಲ್ಲಿ ಬಂದು ಹಲ್ಲೆ ನಡೆಸಿದ್ದರು.

ಶಿವಮೊಗ್ಗದ ಮಧು ಮೇಲೆ ಹಲ್ಲೆ ನಡೆಸಿ ಐವರ ಬಂಧನ
ಶಿವಮೊಗ್ಗದ ಮಧು ಮೇಲೆ ಹಲ್ಲೆ ನಡೆಸಿ ಐವರ ಬಂಧನ

By

Published : Apr 8, 2022, 8:24 PM IST

ಶಿವಮೊಗ್ಗ: ಮಧು ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ನಿನ್ನೆ ಶಿವಮೊಗ್ಗದ ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧು ಹೂವನ್ನು ಮನೆಯೊಂದಕ್ಕೆ ನೀಡಿ ವಾಪಸ್ ಆಗುವಾಗ ಆರು ಜನರು ಮೂರು ಬೈಕ್ ನಲ್ಲಿ ಬಂದು ಹಲ್ಲೆ ನಡೆಸಿದ್ದರು.


ತನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು ಹಾಗೂ ಮೂವರು ಚಾಕುವಿನಿಂದ ಇರಿಯಲು ಬಂದಿದ್ದರು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದ. ಹಲ್ಲೆಗೆ ಒಳಗಾದ ನಂತರ ಮಧು ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದ.

ಇದನ್ನೂ ಓದಿ: ಶಿವಮೊಗ್ಗ: ಯುವಕನ ಮೇಲೆ ಗುಂಪಿನಿಂದ ಹಲ್ಲೆ, ಆಸ್ಪತ್ರೆಗೆ ದಾಖಲು

ಘಟನೆಗೆ ಕಾರಣ?: ಕೆಲ ದಿನಗಳ ಹಿಂದೆ ಮಧು ಮೇಲೆ ಹಲ್ಲೆ ನಡೆಸಿದವರು ಮಂಡ್ಲಿಯ ಖಾಲಿ ಜಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಈ ಹಿಂದೆ ಸ್ಥಳೀಯರಿಂದ ಥಳಿತಕ್ಕೆ ಒಳಗಾಗಿದ್ದರು. ಆ ವೇಳೆ ಮಧು ಸಹ ಥಳಿಸಿದ್ದನು. ಇದರ ಸೇಡು ಇಟ್ಟುಕೊಂಡಿದ್ದ ಆರೋಪಿಗಳು ನಿನ್ನೆ ಮಧು ಮೇಲೆ ಹಲ್ಲೆ ನಡೆಸಿದ್ದಾರೆ.

ABOUT THE AUTHOR

...view details