ಶಿವಮೊಗ್ಗ:ಆಕಸ್ಮಿಕವಾಗಿ ಬೆಂಕಿ ತಗುಲಿ ತೋಟದ ಮನೆಯೊಂದು ಸುಟ್ಟು ಭಸ್ಮವಾಗಿರುವ ಘಟನೆ, ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿಂಗದೂರು ರಸ್ತೆಯ ನಿವಾಸಿ ನಾರಾಯಣಪ್ಪ ಎಂಬುವರ ಮನೆಯ ಹಿಂಭಾಗದ ತೋಟದ ಮನೆಗೆ, ಮಧ್ಯ ರಾತ್ರಿ ಬೆಂಕಿ ಬಿದ್ದಿದೆ.
ಸುಟ್ಟು ಭಸ್ಮವಾದ ತೋಟದ ಮನೆ: ಬೇಳೂರು ಗೋಪಾಲಕೃಷ್ಣ ಧನಸಹಾಯ - fire accident in shivamogga
ಆಕಸ್ಮಿಕವಾಗಿ ಬೆಂಕಿ ತಗುಲಿ ತೋಟದ ಮನೆಯೊಂದು ಸುಟ್ಟು ಭಸ್ಮವಾಗಿರುವ ಘಟನೆ, ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ನಡೆದಿದೆ
![ಸುಟ್ಟು ಭಸ್ಮವಾದ ತೋಟದ ಮನೆ: ಬೇಳೂರು ಗೋಪಾಲಕೃಷ್ಣ ಧನಸಹಾಯ fire accident in shivamogga](https://etvbharatimages.akamaized.net/etvbharat/prod-images/768-512-5931432-thumbnail-3x2-smk.jpg)
ಸುಟ್ಟು ಭಸ್ಮವಾದ ತೋಟದ ಮನೆ
ಸುಟ್ಟು ಭಸ್ಮವಾದ ತೋಟದ ಮನೆ
ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂ ಮೌಲ್ಯದ ಮರಗಳು ಸುಟ್ಟು ಭಸ್ಮವಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಈ ವಿಷಯ ತಿಳಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ, ನಾರಾಯಣಪ್ಪನರಿಗೆ ಧನ ಸಹಾಯ ಮಾಡಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.