ಕರ್ನಾಟಕ

karnataka

ETV Bharat / state

ಸೋನಿಯಾ ಗಾಂಧಿ ವಿರುದ್ಧ ಎಫ್​ಐಆರ್: ಪೊಲೀಸ್​​ ಅಧಿಕಾರಿ ಅಮಾನತಿಗೆ  ಕಾಂಗ್ರೆಸ್ ಸಮಿತಿ ಒತ್ತಾಯ - ಸಿ.ಪಿ.ಐ ಮಹೇಶ್ವರ ನಾಯ್ಕ್

ಸುಳ್ಳು ದೂರು ದಾಖಲಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಠಾಣೆ ಸಬ್ ಇನ್ಸ್​​ಪೆಕ್ಟರ್​​​​​​​​ ವಿರುದ್ಧ ಕ್ರಮಕೈಗೊಂಡು, ಅವರನ್ನು ಅಮಾನತು ಪಡಿಸುವಂತೆ ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

FIR to Sonia Gandhi
ಸೋನಿಯಾ ಗಾಂಧಿ ವಿರುದ್ಧ ಎಫ್​ಐಆರ್

By

Published : May 22, 2020, 5:43 PM IST

ಶಿವಮೊಗ್ಗ:ಎ.ಐ.ಸಿ.ಸಿ.ಅಧ್ಯಕ್ಷೆ ಸೋನಿಯ ಗಾಂಧಿ ವಿರುದ್ಧ ಸುಳ್ಳು ದೂರು ನೀಡಿದ್ದ ಸಾಗರದ ವಕೀಲ ಕೆ.ಎ ಪ್ರವೀಣ್​​ ಕುಮಾರ್​​​​​​ ಅವರ ಅರ್ಜಿಯನ್ನು ಪುರಸ್ಕರಿಸಿದ ಟೌನ್​ ಪೊಲೀಸ್​ ಠಾಣೆ ಸಿ.ಪಿ.ಐ ಮಹೇಶ್ವರ ನಾಯ್ಕ್​​ರ ವಿರುದ್ಧ ಕ್ರಮ ಕೈಗೊಂಡು ಕರ್ತವ್ಯದಿಂದ ತಕ್ಷಣ ಅಮಾನತು ಪಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರ ನಿಯೋಗ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಾಂಗ್ರೆಸ್​ ಅಧಿಕೃತ ಟ್ವಿಟರ್​​​ ಖಾತೆಯಿಂದ ಪಿಎಂ ಕೇರ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಸುದ್ದಿಯನ್ನು​ ತಿರುಚಿರುವ ವಕೀಲ ಕೆ.ವಿ ಪ್ರವೀಣ್ ಕುಮಾರ್, ನೈಜ ಸುದ್ದಿಗೆ ಮತ್ತಷ್ಟು ಸುಳ್ಳು ಅಂಶಗಳನ್ನು ಸೇರಿಸಿ ನೀಡಿರುವ ದೂರನ್ನು ಯಾವುದೇ ಹಂತದಲ್ಲಿ ಪರಿಶೀಲನೆ ನಡೆಸಿದಂತಿಲ್ಲ ಎಂದು ದೂರಿದ್ದಾರೆ.

ABOUT THE AUTHOR

...view details