ಶಿವಮೊಗ್ಗ:ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.
ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಹೆಚ್.ಆರ್.ಬಸವರಾಜಪ್ಪ - farmers protest against state and central govt
ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.
![ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಹೆಚ್.ಆರ್.ಬಸವರಾಜಪ್ಪ farmers protest against state and central govt in shivamogg](https://etvbharatimages.akamaized.net/etvbharat/prod-images/768-512-5810212-thumbnail-3x2-sgm.jpg)
ರೈತರ ಸಾಲ ವಸೂಲಿಗೆ ನಿಮಗೆ ಹಕ್ಕಿಲ್ಲ
ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಬಸವರಾಜಪ್ಪ
ಇಲ್ಲಿನ ಸಹಕಾರಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿಗಳು ರೈತರ ಟ್ರ್ಯಾಕ್ಟರ್ಗಳ ಜಪ್ತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಪಿಎಲ್ಡಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದವು.
ಕೇಂದ್ರ, ರಾಜ್ಯ ಸರ್ಕಾರಗಳು ಬ್ಯಾಂಕ್ಗಳ ಮೂಲಕ ರೈತರ ಬದುಕಿನ ಜೊತೆ ಆಟವಾಡುತ್ತಿವೆ. ಸ್ವಾಮಿನಾಥನ್ ವರದಿ ಜಾರಿ, ಕೃಷಿ ಆಯೋಗ ರಚನೆ, ಬೆಂಬಲ ಬೆಲೆ ಸೇರಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಿ. ಆಮೇಲೆ ಸಾಲ ಕೇಳಿ, ವಾಪಸ್ ಕೊಡುತ್ತೇವೆ ಎಂದು ಹೇಳಿದರು.