ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಅನ್ನದಾತರ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಹೌದು, ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಂಜನಾಪುರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಜನರು ಭೇಟಿ ನೀಡುತ್ತಿದ್ದಾರೆ.
ಅಂಜನಾಪುರ ಜಲಾಶಯವು 21 ಅಡಿಗಳಷ್ಟು ಎತ್ತರ ಇದೆ ಹಾಗೂ ಜಲಾಶಯಕ್ಕೆ ಒಟ್ಟು 70 ಗೇಟ್ಗಳಿವೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 70 ಗೇಟ್ ಗಳನ್ನೂ ಓಪನ್ ಮಾಡಲಾಗಿದೆ. ಶಿಕಾರಿಪುರ ಭಾಗದ ರೈತರ ಭೂಮಿಗೆ ನೀರು ಒದಗಿಸುವ ಜಲಾಶಯ ಇದಾಗಿದ್ದು, ಜಲಾಶಯದ ಸಾಮರ್ಥ್ಯ 1.82 ಟಿಎಂಸಿ ಗಳಷ್ಟಾಗಿದೆ.