ಶಿವಮೊಗ್ಗ:ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಶಿವಪ್ಪನಾಯಕನ ವೃತ್ತದಿಂದ ನೆಹರು ರಸ್ತೆ ಮೂಲಕ ಗೋಪಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗದಲ್ಲಿ ಬೀದಿ ನಾಟಕದ ಮೂಲಕ ಪರಿಸರ ಜಾಗೃತಿ - shivamogga latest news
ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಶಿವಪ್ಪನಾಯಕನ ವೃತ್ತದಿಂದ ನೆಹರು ರಸ್ತೆ ಮೂಲಕ ಗೋಪಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
![ಶಿವಮೊಗ್ಗದಲ್ಲಿ ಬೀದಿ ನಾಟಕದ ಮೂಲಕ ಪರಿಸರ ಜಾಗೃತಿ](https://etvbharatimages.akamaized.net/etvbharat/prod-images/768-512-4657457-thumbnail-3x2-vid.jpg)
ಬೀದಿ ನಾಟಕದ ಮೂಲಕ ಪರಿಸರ ಜಾಗೃತಿ
ಬೀದಿ ನಾಟಕದ ಮೂಲಕ ಪರಿಸರ ಜಾಗೃತಿ
ಪರಿಸರ ಜಾಥ ಕಾರ್ಯಕ್ರಮದಲ್ಲಿ ಕಾಲೇಜು ವಿಧ್ಯಾರ್ಥಿಗಳು, ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಮತ್ತು ಬಸವ ಕೇಂದ್ರ ಬಸವ ಮರಳು ಸಿದ್ದ ಸ್ವಾಮೀಜಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂಬ ಬೀದಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಇನ್ನು ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಗೂ ಬಟ್ಟೆ ಚೀಲ ನೀಡಿ ಪ್ಲಾಸ್ಟಿಕ್ ತ್ಯಜಿಸಿ ಎಂಬ ಸಂದೇಶ ನೀಡಿದರು.