ಶಿವಮೊಗ್ಗ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಮಂಜುನಾಥ್ (34) ಎಂಬ ಸರಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಜನದಟ್ಟಣೆ ಕಡಿಮೆ ಇರುವ ಬಡಾವಣೆಗಳಲ್ಲಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರ ಬಳಿ ಅಡ್ರೆಸ್ ಕೇಳುತ್ತಾ ಅವರ ಸರ ಕದ್ದು ಪರಾರಿಯಾಗುತ್ತಿದ್ದ. ಈ ಕುರಿತು ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
'ಅಡ್ರಸ್ ಸರಗಳ್ಳ' ಸಿಕ್ಕಿದ್ದೇ ರೋಚಕ.. ₹2 ಲಕ್ಷ ಮೌಲ್ಯದ ಚಿನ್ನದ ಸರ ವಶ.. - ಶಿವಮೊಗ್ಗದಲ್ಲಿ ಸರಗಳ್ಳನ ಬಂಧನ
ಬಂಧಿತ ಶಿವಮೊಗ್ಗ ತಾಲೂಕು ಕೋಟೆಗಂಗೂರು ಗ್ರಾಮದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ. ₹2.30 ಲಕ್ಷ ಮೌಲ್ಯದ 65 ಗ್ರಾಂ ತೂಕದ 2 ಚಿನ್ನದ ಸರ ಹಾಗೂ ಬಜಾಜ್ ಡಿಸ್ಕವರಿ ಬೈಕ್ನ ವಶಕ್ಕೆ ಪಡೆಯಲಾಗಿದೆ.
!['ಅಡ್ರಸ್ ಸರಗಳ್ಳ' ಸಿಕ್ಕಿದ್ದೇ ರೋಚಕ.. ₹2 ಲಕ್ಷ ಮೌಲ್ಯದ ಚಿನ್ನದ ಸರ ವಶ.. Detention of thief in Shimoga](https://etvbharatimages.akamaized.net/etvbharat/prod-images/768-512-5605688-thumbnail-3x2-sana.jpg)
ಶಿವಮೊಗ್ಗದಲ್ಲಿ ಸರಗಳ್ಳನ ಬಂಧನ
ಕಳೆದ ವಾರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದು ಹೋಗುತಿದ್ದ ಮಹಿಳೆಯ ಬಳಿ ಬಂದು, ವಿಳಾಸ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದಪುಡಿ ಹಾಕಿ ಬಂಗಾರದ ಚೈನ್ ಹಾಗೂ ಅವಲಕ್ಕಿ ಸರ ಕಿತ್ತು ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದ ವಿನೋಬನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಶಿವಮೊಗ್ಗ ತಾಲೂಕು ಕೋಟೆಗಂಗೂರು ಗ್ರಾಮದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ. ₹2.30 ಲಕ್ಷ ಮೌಲ್ಯದ 65 ಗ್ರಾಂ ತೂಕದ 2 ಚಿನ್ನದ ಸರ ಹಾಗೂ ಬಜಾಜ್ ಡಿಸ್ಕವರಿ ಬೈಕ್ನ ವಶಕ್ಕೆ ಪಡೆಯಲಾಗಿದೆ.