ಶಿವಮೊಗ್ಗ:ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆ ಕೃತಕ ಅಭಾವ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಪರವಾನಿಗೆ ಆದೇಶ ತಿದ್ದುಪಡಿ-2019ನ್ನು ಜಾರಿಗೊಳಿಸಿದೆ. ಜಿಲ್ಲೆಯ ಈರುಳ್ಳಿ ಸಗಟು ಮತ್ತು ಚಿಲ್ಲರೆ ವರ್ತಕರು ಕೂಡಲೇ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಸೂಚಿಸಿದ್ದಾರೆ.
ಈರುಳ್ಳಿ ವರ್ತಕರಿಗೆ ಅಗತ್ಯ ವಸ್ತುಗಳ ಪರವಾನಿಗೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ.. - ಮಾರುಕಟ್ಟೆಯಲ್ಲಿ ಈರುಳ್ಳಿಯ ಅಭಾವ
ಮಾರುಕಟ್ಟೆಯಲ್ಲಿ ಈರುಳ್ಳಿಯ ಅಭಾವ ದಿನೇದಿನೆ ಹೆಚ್ಚುತ್ತಿದೆ. ಈರುಳ್ಳಿಯ ಕೃತಕ ಅಭಾವ ತಪ್ಪಿಸಲು ಈರುಳ್ಳಿ ವರ್ತಕರಿಗೆ ಅಗತ್ಯ ವಸ್ತುಗಳ ಪರವಾನಿಗೆ ಪಡೆಯುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
![ಈರುಳ್ಳಿ ವರ್ತಕರಿಗೆ ಅಗತ್ಯ ವಸ್ತುಗಳ ಪರವಾನಿಗೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ.. D.C instructed](https://etvbharatimages.akamaized.net/etvbharat/prod-images/768-512-5365699-thumbnail-3x2-vicky.jpg)
ಜಿಲ್ಲಾಧಿಕಾರಿ ಸೂಚನೆ
ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಇದರ ಸದುಪಯೋಗ ಪಡೆಯುತ್ತಿರುವ ಕೆಲ ದಾಸ್ತಾನುದಾರರು ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವವನ್ನು ಸೃಷ್ಠಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.
ಅಲ್ಲದೆ, ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವವನ್ನು ಸೃಷ್ಠಿಸಲು ಕಾರಣರಾದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.