ಶಿವಮೊಗ್ಗ :ರಾಜಕೀಯ ಜಂಜಾಟದ ನಡುವೆಯೂ ಸಿಎಂ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ತಮ್ಮ ನೆಚ್ಚಿನ ಮೀನಾಕ್ಷಿ ಭವನ ಹೋಟೆಲ್ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ.
ರಿಲ್ಯಾಕ್ಸ್ ಮೂಡ್ನಲ್ಲಿ ಬಿಎಸ್ವೈ! ಮಗನೊಂದಿಗೆ ಮಸಾಲೆ ದೋಸೆ ಸವಿದ ಮುಖ್ಯಮಂತ್ರಿಗಳು.. - shimogga meenakshi hotel latest news
ಈ ಹಿಂದೆ ಬಂದಾಗ ಬಿಡುವಿಲ್ಲದೆ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಸಿಎಂ, ಇಂದು ಸಂಜೆ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಪ್ಯಾಡ್ನಿಂದ ಮೀನಾಕ್ಷಿ ಭವನಕ್ಕೆ ಹೋಗಿ ದೋಸೆ, ವಡೆ ಸವಿದರು.

ರಿಲಾಕ್ಸ್ ಮೂಡ್ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಯಡಿಯೂರಪ್ಪ!
ನಾಳೆ ದಿನವಿಡೀ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿನ ಮೀನಾಕ್ಷಿ ಭವನದ ಮಸಾಲೆ ದೋಸೆ ಹಾಗೂ ಉದ್ದಿನವಡೆ ಸಿಎಂ ಬಿಎಸ್ವೈಗೆ ಅಚ್ಚುಮೆಚ್ಚು. ಈ ಹಿಂದೆ ಬಂದಾಗ ಬಿಡುವಿಲ್ಲದೆ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಸಿಎಂ, ಇಂದು ಸಂಜೆ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಪ್ಯಾಡ್ನಿಂದ ಮೀನಾಕ್ಷಿ ಭವನಕ್ಕೆ ಹೋಗಿ ದೋಸೆ, ವಡೆ ಸವಿದರು.
ಯಡಿಯೂರಪ್ಪನವರಿಗೆ ಸಂಸದರಾಗಿರುವ ಪುತ್ರ ಬಿ ವೈ ರಾಘವೇಂದ್ರ, ಎಂಎಲ್ಸಿ ಎಸ್ ರುದ್ರೇಗೌಡ ಸೇರಿ ಇತರರು ಸಾಥ್ ನೀಡಿದರು.