ಕರ್ನಾಟಕ

karnataka

ಶಿವಮೊಗ್ಗದಲ್ಲಿ ಭೀಕರ ಕಾರು ಅಪಘಾತ: ಬ್ಯಾಂಕ್ ನೌಕರ ಸಾವು

By

Published : Oct 2, 2019, 10:45 AM IST

ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬ್ಯಾಂಕ್ ನೌಕರ ದಿನೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಚೋರಡಿ ಬಳಿ ದುರ್ಘಟನೆ ಸಂಭವಿಸಿದೆ.

ಶಿವಮೊಗ್ಗದಲ್ಲಿ ಕಾರ್​ ಅಪಘಾತ: ಬ್ಯಾಂಕ್ ನೌಕರ ಸಾವು

ಶಿವಮೊಗ್ಗ:ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರಂತವೊಂದು ಸಂಭವಿಸಿದೆ. ಕಾರಿನಲ್ಲಿದ್ದ ಬ್ಯಾಂಕ್ ನೌಕರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಚೋರಡಿ ಬಳಿ ನಡೆದಿದೆ.

ಶಿವಮೊಗ್ಗದಲ್ಲಿ ಕಾರ್​ ಅಪಘಾತ: ಬ್ಯಾಂಕ್ ನೌಕರ ಸಾವು

ಚಿಕ್ಕಮರಸ ಗ್ರಾಮದ ದಿನೇಶ್ (28) ಮೃತಪಟ್ಟ ನೌಕರ ಎಂದು ತಿಳಿದುಬಂದಿದೆ. ದಿನೇಶ್​ ಮಂಡಗದ್ದೆ ಗ್ರಾಮದ ಕರ್ನಾಟಕ ಬ್ಯಾಂಕ್​ನ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಕೋಣೆಹೂಸೂರು ಗ್ರಾಮಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಸಾಗುವಾಗ ಕಾರು ಅಪಘಾತವಾಗಿ, ದಿನೇಶ್ ಸ್ಥಳದಲ್ಲೇ​ ಮೃತಪಟ್ಟಿದ್ದಾರೆ. ಸದ್ಯ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details