ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಭಯಾನಕ ಅಪಘಾತ : ಬಸ್​ಗೆ ಡಿಕ್ಕಿ ಹೊಡೆದು ಸೇತುವೆಯಿಂದ ಬಿದ್ದ ಕಾರು - bus and car accident

ಬಸ್​ಗೆ ಡಿಕ್ಕಿ ಹೊಡೆದ ಕಾರು ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ಹೊಸನಗರದ ಬಟ್ಟೆ ಮಲ್ಲಪ್ಪ ಬಳಿ ನಡೆದಿದೆ.

shivmogga
ಅಪಘಾತ

By

Published : Feb 8, 2020, 2:38 PM IST

ಶಿವಮೊಗ್ಗ: ಬಸ್​ಗೆ ಡಿಕ್ಕಿ ಹೊಡೆದ ಕಾರು ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ಹೊಸನಗರದ ಬಟ್ಟೆ ಮಲ್ಲಪ್ಪ ಬಳಿ ನಡೆದಿದೆ.

ಅಪಘಾತದಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿರುವ ಕಾರು

ಹೊನ್ನಾವರದಿಂದ ನಗರದ ದರ್ಗಾಕ್ಕೆ ಬರುತ್ತಿದ್ದ ಕಾರು ಬಟ್ಟೆಮಲ್ಲಪ್ಪ ಬಳಿ ಹರಿದ್ರಾವತಿ ನದಿಯ ಮುಡುಬ ಸೇತುವೆ ಮೇಲೆ ಬರುವಾಗ ದುರ್ಗಾಂಬ ಬಸ್​ಗೆ ಡಿಕ್ಕಿ ಹೊಡೆದಿದೆ. ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸೇತುವೆಯಿಂದ ಸುಮಾರು‌ 30 ಅಡಿ ಮೇಲಿಂದ ನದಿಗೆ ಬಿದ್ದಿದೆ.

ನದಿಯಲ್ಲಿ ನೀರು ಇಲ್ಲದ ಕಾರಣ ಕಾರಿನಲ್ಲಿದ್ದವರ ಪ್ರಾಣಕ್ಕೇನು ಅಪಾಯವಾಗಿಲ್ಲ. ಆದರೆ ಕಾರಿನ ಚಾಲಕನ ಕೈ ಮುರಿದಿದ್ದು, ಇನ್ನಿಬ್ಬರ ಕಾಲು ಮುರಿತವಾಗಿದೆ. ಇನ್ನು ಅವರನ್ನು ಹೊಸನಗರದ ತಾಲೂಕು ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಗಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ.

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details