ಕರ್ನಾಟಕ

karnataka

ಆದಾಯ ಪ್ರಮಾಣ ಪತ್ರಕ್ಕಾಗಿ ಲಂಚ:ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

By

Published : May 21, 2019, 10:26 PM IST

ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಲಂಚ ಕೇಳಿದ ಉಪ ತಹಶೀಲ್ದಾರ್‌ ಎಸಿಬಿ ಬಲೆಗೆ ಬಿದ್ದರು.

ಎಸಿಬಿ ಬಲಗೆ ಬಿದ್ದ ಉಪ ತಹಶೀಲ್ದಾರ್

ಶಿವಮೊಗ್ಗ:ತಾಲೂಕಿನ ನಿದಿಗೆಯ ನಾಡ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ನೀಡಲು 8 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಾವಿತ್ರಿ ಎಂಬ ಮಹಿಳೆ ವೃದ್ಧಾಪ್ಯ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಮಾಣ ಪತ್ರ ಬೇಕಾದರೆ 15 ಸಾವಿರ ರೂ. ಲಂಚ ಕೊಡಬೇಕೆಂದು ಉಪ ತಹಶೀಲ್ದಾರ್​​ ಪ್ರದೀಪ್​ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಸಾವಿತ್ರಿ ಎಸಿಬಿಗೆ ದೂರು ನೀಡಿದ್ದಾರೆ.ಈ ಸಂಬಂಧ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ತಂಡ ಯೋಜನೆ ರೂಪಿಸಿ​ ಉಪ ತಹಶೀಲ್ದರ್​ ಪ್ರದೀಪ್​​ ಅವರನ್ನು ಬಂಧಿಸಿದೆ.

For All Latest Updates

TAGGED:

ABOUT THE AUTHOR

...view details