ಕರ್ನಾಟಕ

karnataka

By

Published : May 11, 2020, 8:07 PM IST

ETV Bharat / state

ಕೊರೊನಾ ವಾರಿಯರ್ಸ್​ಗೆ ಬಂಗಾರಪ್ಪ ಫೌಂಡೇಶನ್​ ವತಿಯಿಂದ ಅಭಿನಂದನೆ

ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರ್ಸ್​ಗಳು, ಆಶಾ ಕಾರ್ಯಕರ್ತೆಯರಿಗೆ ಅರಶಿಣ-ಕುಂಕುಮ, ಹೂವು, ಬಳೆ ನೀಡಿ ಮಡಿಲಕ್ಕಿ ಜೊತೆ ಸೀರೆ ಕೊಟ್ಟು ಅಭಿನಂದನೆ ಸಲ್ಲಿಸಲಾಯಿತು.

bangarappa-foundation
ಬಂಗಾರಪ್ಪ ಫೌಂಡೇಶನ್​

ಶಿವಮೊಗ್ಗ: ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು, ನರ್ಸ್​, ವೈದ್ಯರು ಹಾಗೂ ಪೌರಕಾರ್ಮಿಕರಿಗೆ ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರ್ಸ್​ಗಳು, ಆಶಾ ಕಾರ್ಯಕರ್ತೆಯರಿಗೆ ಅರಶಿಣ-ಕುಂಕುಮ, ಹೂವು, ಬಳೆ ನೀಡಿ ಮಡಿಲಕ್ಕಿ ಜೊತೆ ಸೀರೆ ಕೊಟ್ಟು ಅಭಿನಂದನೆ ಸಲ್ಲಿಸಲಾಯಿತು. ಜೊತೆಗೆ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಕೆಲಸ ಮಾಡುವ ಅವರಿಗೆ ಛತ್ರಿಯನ್ನು ಸಹ ನೀಡಲಾಯಿತು.

ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ​

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಕೂಡ ಅಗತ್ಯ ಸಾಮಾಗ್ರಿಗಳ ಕಿಟ್ ಜೊತೆಗೆ ರೈನ್​ ಕೋಟ್ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಇದರ ಜೊತೆಗೆ ಬಂಗಾರಪ್ಪ ಫೌಂಡೇಶನ್ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸೊರಬ ತಾಲೂಕಿನ ವಿವಿಧ ಭಾಗದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೂಡ ವಿತರಣೆ ಮಾಡಿದೆ.

ABOUT THE AUTHOR

...view details