ಶಿವಮೊಗ್ಗ: ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು, ನರ್ಸ್, ವೈದ್ಯರು ಹಾಗೂ ಪೌರಕಾರ್ಮಿಕರಿಗೆ ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕೊರೊನಾ ವಾರಿಯರ್ಸ್ಗೆ ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ - shivamoga, soraba news
ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರ್ಸ್ಗಳು, ಆಶಾ ಕಾರ್ಯಕರ್ತೆಯರಿಗೆ ಅರಶಿಣ-ಕುಂಕುಮ, ಹೂವು, ಬಳೆ ನೀಡಿ ಮಡಿಲಕ್ಕಿ ಜೊತೆ ಸೀರೆ ಕೊಟ್ಟು ಅಭಿನಂದನೆ ಸಲ್ಲಿಸಲಾಯಿತು.
![ಕೊರೊನಾ ವಾರಿಯರ್ಸ್ಗೆ ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ bangarappa-foundation](https://etvbharatimages.akamaized.net/etvbharat/prod-images/768-512-7152225-513-7152225-1589191837726.jpg)
ಬಂಗಾರಪ್ಪ ಫೌಂಡೇಶನ್
ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರ್ಸ್ಗಳು, ಆಶಾ ಕಾರ್ಯಕರ್ತೆಯರಿಗೆ ಅರಶಿಣ-ಕುಂಕುಮ, ಹೂವು, ಬಳೆ ನೀಡಿ ಮಡಿಲಕ್ಕಿ ಜೊತೆ ಸೀರೆ ಕೊಟ್ಟು ಅಭಿನಂದನೆ ಸಲ್ಲಿಸಲಾಯಿತು. ಜೊತೆಗೆ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಕೆಲಸ ಮಾಡುವ ಅವರಿಗೆ ಛತ್ರಿಯನ್ನು ಸಹ ನೀಡಲಾಯಿತು.
ಬಂಗಾರಪ್ಪ ಫೌಂಡೇಶನ್ ವತಿಯಿಂದ ಅಭಿನಂದನೆ
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಕೂಡ ಅಗತ್ಯ ಸಾಮಾಗ್ರಿಗಳ ಕಿಟ್ ಜೊತೆಗೆ ರೈನ್ ಕೋಟ್ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಇದರ ಜೊತೆಗೆ ಬಂಗಾರಪ್ಪ ಫೌಂಡೇಶನ್ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸೊರಬ ತಾಲೂಕಿನ ವಿವಿಧ ಭಾಗದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೂಡ ವಿತರಣೆ ಮಾಡಿದೆ.