ಶಿವಮೊಗ್ಗ:ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ನಿನ್ಮೆ ರಾತ್ರಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಭದ್ರಾವತಿಯ ಅವರ ಮನೆಯ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರ ಅಪಾರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಅಗಲಿದ ನಾಯಕನಿಗೆ ಕಣ್ಣೀರ ವಿದಾಯ ಹೇಳಿದ್ದಾರೆ.
ಅಪ್ಪಾಜಿ ಗೌಡ ನಿಧನ: ಅಗಲಿದ ನಾಯಕನಿಗೆ ಅಭಿಮಾನಿಗಳಿಂದ ಕಣ್ಣೀರಿನ ವಿದಾಯ
ಮಾಜಿ ಶಾಸಕ ಅಪ್ಪಾಜಿ ಗೌಡ ನಿನ್ಮೆ ರಾತ್ರಿ ನಿಧನರಾಗಿದ್ದು, ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಅಗಲಿದ ನಾಯಕನಿಗೆ ಕಣ್ಣೀರು ಹಾಕುವ ಮೂಲಕ ವಿದಾಯ ಹೇಳುತ್ತಿದ್ದಾರೆ.
ಅಪ್ಪಾಜಿ ಗೌಡ ನಿಧನ: ಅಗಲಿದ ನಾಯಕನಿಗೆ ಕಣ್ಣೀರ ನಮನ
ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದ ಮಾಜಿ ಶಾಸಕರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬೆಳಗ್ಗೆಯಿಂದ ರಾಜಕೀಯ ನಾಯಕರು, ಕುಟುಂಬದವರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.