ಕರ್ನಾಟಕ

karnataka

By

Published : Sep 3, 2020, 2:19 PM IST

ETV Bharat / state

ಅಪ್ಪಾಜಿ ಗೌಡ ನಿಧನ: ಆ್ಯಂಬುಲೆನ್ಸ್​​ನಲ್ಲಿ ಅಗಲಿದ ನಾಯಕನ ಅಂತಿಮ ಮೆರವಣಿಗೆ

ಕೊರೊನಾ ಸೋಂಕಿನಿಂದ ಅಪ್ಪಾಜಿ ಗೌಡ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ತಾಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದೆ.

Appaji Gowda final parade
ಆ್ಯಂಬುಲೆನ್ಸ್​​ನಲ್ಲಿ ಅಪ್ಪಾಜಿ ಗೌಡ ಅಂತಿಮ ಮೆರವಣಿಗೆ

ಶಿವಮೊಗ್ಗ: ಕೊರೊನಾ ಸೋಂಕಿನಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು, ರಾಜಕೀಯ ನಾಯಕರು, ಕುಟುಂಬಸ್ಥರು ಅವರ ಅಂತಿಮ ದರ್ಶನ ಪಡೆದರು.

ಆ್ಯಂಬುಲೆನ್ಸ್​​ನಲ್ಲಿ ಅಪ್ಪಾಜಿ ಗೌಡ ಅವರ ಅಂತಿಮ ಮೆರವಣಿಗೆ

ಕೊರೊನಾ ಸೋಂಕಿನಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ತಾಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿವೆ. ಆದರೂ ಕೂಡ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಅಂತಿಮ ದರ್ಶನ ಮುಗಿದ ನಂತರ ಆ್ಯಂಬುಲೆನ್ಸ್​​ನಲ್ಲಿ ಅಗಲಿದ ನಾಯಕನ ಮೆರವಣಿಗೆ ಮಾಡಲಾಯಿತು.

ಆ್ಯಂಬುಲೆನ್ಸ್​​ನಲ್ಲಿ ಅಗಲಿದ ನಾಯಕನ ಅಂತಿಮ ಮೆರವಣಿಗೆ

ಅಪ್ಪಾಜಿ ಗೌಡ ಅವರ ಶವ ಸಂಸ್ಕಾರವನ್ನು ಗೋಣಿಬಿಡಿನ ತೋಟದಲ್ಲಿ ಮಾಡಲಾಗುತ್ತದೆ.

ABOUT THE AUTHOR

...view details