ಕರ್ನಾಟಕ

karnataka

ETV Bharat / state

ಕಾರು-ಬೈಕ್ ಡಿಕ್ಕಿ: ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿಯನ್ನು ರಕ್ಷಿಸಿದ ಯುವಕ - ಶರಾವತಿ ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿ

ಶರಾವತಿ ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿಯನ್ನು ಯುವಕನೋರ್ವ ರಕ್ಷಿಸಿರುವ ಘಟನೆ ಸಾಗರದ ಕಾರ್ಗಲ್ ಬಳಿ ನಡೆದಿದೆ.

Accident between car and bike
ಕಾರು- ಬೈಕ್ ನಡುವೆ ಅಪಘಾತ

By

Published : Aug 26, 2020, 10:13 AM IST

ಶಿವಮೊಗ್ಗ:ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿಯನ್ನು ಯುವಕನೋರ್ವ ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆ ಸಾಗರದ ಕಾರ್ಗಲ್ ಬಳಿ ನಡೆದಿದೆ.

ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿಯನ್ನು ರಕ್ಷಿಸಿದ ಯುವಕ

ಅರಳಗೋಡಿನಿಂದ ಸಾಗರದ ಕಡೆ ಅನುರಾಧ ಹಾಗೂ ಆಕೆಯ ಸಹೋದರ ಬೈಕ್​ನಲ್ಲಿ ಹೊರಟಿದ್ದರು. ಈ ವೇಳೆ ಸಾಗರ ಕಡೆಯಿಂದ ಬಂದ ಕಾರು ಬೈಕ್​​ಗೆ ಚೈನಾ ಗೇಟ್​​ನ ಶರಾವತಿ ಕಾಲುವೆ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಅಲ್ಲೆ ಬಿದ್ದಿದ್ದಾನೆ. ಆದರೆ ಬೈಕ್​​ನ ಹಿಂಬದಿ ಕುಳಿತಿದ್ದ ಯುವತಿ ಅನುರಾಧ ಹಾರಿ ಕಾಲುವೆಗೆ ಬಿದ್ದಿದ್ದಾಳೆ. ಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿತ್ತು.‌ ನೀರಿನ ರಭಸಕ್ಕೆ ಅನುರಾಧ ತೇಲಿ ಹೋಗಿದ್ದಾಳೆ. ಅಷ್ಟರಲ್ಲಿ ಮನೆಯಲ್ಲೇ ಇದ್ದ ಲತೀಫ್ ಎಂಬ ಯುವಕ ಅನುರಾಧ ತೇಲಿ ಹೋಗುವುದನ್ನು ನೋಡಿ ಯಾವುದೇ ಅಲೋಚನೆ ಮಾಡದೆ ಕಾಲುವೆ ಹಾರಿ ಯುವತಿಯನ್ನು ರಕ್ಷಿಸಿದ್ದಾನೆ.

ತಕ್ಷಣ ಯುವತಿ ಹಾಗೂ ಆಕೆಯ ಸಹೋದರನನ್ನು ಆ್ಯಂಬುಲೆನ್ಸ್​​ನಲ್ಲಿ ಸಾಗರಕ್ಕೆ ರವಾನೆ ಮಾಡಲಾಗಿದೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಾಣದ ಹಂಗನ್ನು ತೊರೆದು ಯುವತಿಯನ್ನು ರಕ್ಷಿಸಿದ ಲತೀಫ್ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details