ಕರ್ನಾಟಕ

karnataka

ETV Bharat / state

ಕೊರೊನಾಗೆ ಕ್ಷೌರಿಕ ಬಲಿ: ಹೊಸನಗರದ ಆಶಾ ಕಾರ್ಯಕರ್ತೆ ಪತಿಗೆ ಸೋಂಕು ದೃಢ - Shivmogga covid cases

ಹೊಸನಗರದಲ್ಲಿ ಕೊರೊನಾ ವೈರಸ್ ಪ್ರಕರಣವೊಂದು ಪತ್ತೆಯಾಗಿದ್ದು, ಇವರು ಆಶಾ ಕಾರ್ಯಕರ್ತೆಯ ಪತಿ ಎಂದು ತಿಳಿದು ಬಂದಿದೆ.

Shivmogga
Shivmogga

By

Published : Jul 29, 2020, 9:38 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾಗೆ ಓರ್ವ ಬಲಿಯಾಗಿದ್ದು, ಹೊಸನಗರ ಪಟ್ಟಣದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.

ಹೊಸನಗರದ ಮಸೀದಿ ರಸ್ತೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಆಶಾ ಕಾರ್ಯಕರ್ತೆಯ ಪತಿಯಾಗಿರುವ ಇವರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ತಾಲೂಕು ಆಡಳಿತ ಮಸೀದಿ ರಸ್ತೆಯ‌ನ್ನು ಸೀಲ್​​ಡೌನ್ ಮಾಡಿದೆ.‌ ಇನ್ನು ಆಶಾ ಕಾರ್ಯಕರ್ತೆಗೆ ಸಹ ಪರೀಕ್ಷೆ ನಡೆಸಲಾಗಿದ್ದು, ಅವರ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

ಕ್ಷೌರಿಕ ಸಾವು:

ಶಿವಮೊಗ್ಗ ತಾಲೂಕು ಗೊಂದಿ ಚಟ್ನಳ್ಳಿಯ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಮೃತನ ಅಂತ್ಯ ಸಂಸ್ಕಾರ ಮಂಗಳೂರಿನಲ್ಲಿಯೇ ನಡೆಸಲಾಗಿದೆ.

ABOUT THE AUTHOR

...view details