ಶಿವಮೊಗ್ಗ:ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 80 ವರ್ಷದ ಹೆಣ್ಣಾನೆ ಗಂಗೆ ಸಾವನ್ನಪ್ಪಿದೆ.
1971 ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿದು ಗಂಗೆಯನ್ನು ಸಕ್ರೆಬೈಲಿಗೆ ತರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಿಡಾರದ ಪ್ರೀತಿಯ ಆನೆಯಾಗಿತ್ತು. ಇದು ಆರು ಮರಿಗಳಿಗೆ ಜನ್ಮ ನೀಡಿತ್ತು. ಕಾಡಾನೆಗಳನ್ನು ಸೆರೆ ಹಿಡಿಯುವಾಗ ಗಂಗೆಯನ್ನು ಬಳಸಲಾಗುತ್ತಿತ್ತು.