ಕರ್ನಾಟಕ

karnataka

By

Published : Mar 22, 2019, 2:48 PM IST

ETV Bharat / state

ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಿದೆ: ಅನಿತಾ ಕುಮಾರಸ್ವಾಮಿ

ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ, ಈ ಮೂಲಕ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ‌ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದು ಅನಿತಾ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಅನಿತಾ ಕುಮಾರಸ್ವಾಮಿ

ರಾಮನಗರ: ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅನಿತಾ ಕುಮಾರಸ್ವಾಮಿ ತಿಳಿಸಿದರು.

ನಗರದ ಮಂಜುನಾಥ ಕನ್ವೆನ್ಷನ್ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮೈತ್ರಿ ಧರ್ಮ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು. ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ. ಈ ಮೂಲಕ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ‌ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದರು.

ಇದೇ ವೇಳೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ದಿಢೀರ್ ಜೊತೆಗೂಡುವ ಸನ್ನಿವೇಶ ಬಂದಿದೆ. ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಕಳೆದ ಚುನಾವಣೆಯಿಂದ ಹೊಂದಾಣಿಕೆ ‌ಮೂಲಕ‌ ರಾಜ್ಯಕ್ಕೆ ಹೊಸ ಸಂದೇಶ ಹಾಗೂ ಹೆಸರು ತಂದು ಕೊಟ್ಟ ಹೆಗ್ಗಳಿಕೆ ಇದೆ. ಅನಿತಾ ‌ಕುಮಾರಸ್ವಾಮಿ ಅವರು ಕಳೆದ‌ ಚುನಾವಣೆಯಲ್ಲಿ ದಾಖಲೆ‌ ಮಾಡಿದ್ದಾರೆ. ಅದನ್ನ ಮುರಿಯೋದು ಸಾಧ್ಯವೇ ಇಲ್ಲಾ. ಒಂದು ಮನೆಯಲ್ಲಿಯೇ ಎಲ್ಲರೂ ಒಂದೇ ತರ ಇರಲ್ಲ. ಆದ್ದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ. ಚನ್ನಪಟ್ಟಣ ಹೊರತುಪಡಿಸಿ ಬಿಜೆಪಿ ಎಲ್ಲೂ‌ ತಲೆ‌ ಎತ್ತದಂತೆ‌ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಅನಿತಾ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿದ್ದು‌ ಪ್ರಾಮಾಣಿಕವಾಗಿ‌ ಜಿಲ್ಲಾ ಅಭಿವೃದ್ಧಿ ಜೊತೆಗೆ‌ ಎಲ್ಲರನ್ನೂ‌ ಒಟ್ಟಾಗಿ‌ ಕೊಂಡೊಯ್ಯುವ ಕೆಲಸ ಮಾಡ್ತೇನೆ. ನಮ್ಮ ಕಾರ್ಯಕರ್ತರು‌ ಮತ್ತು ಮುಖಂಡರು ಯಾರೇ ತಮಗೆ‌ ತೊಂದರೆ‌ ಕೊಟ್ಟಿದ್ದರೂ, ಕೇಸು ದಾಖಲಾಗುವ ಸನ್ನಿವೇಶ ಬಂದಿದ್ದರೂ ಅದಕ್ಕೆ ಕ್ಷಮೆ‌ ಕೋರುತ್ತೇನೆ‌ ಎಂದು‌ ಡಿ.ಕೆ.ಸುರೇಶ್ ಹೇಳಿದರು.

ವಿಶೇಷವಾಗಿ ರಾಮನಗರ‌ ಅಭಿವೃದ್ಧಿಗೆ ಒತ್ತು‌ ನೀಡಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ನಾವೆಲ್ಲಾ ಒಟ್ಟಾಗಿ‌ ನಿಲ್ಲಬೇಕಿದೆ. ಮಂಡ್ಯ ಕ್ಷೇತ್ರದ ಚುನಾವಣೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಅಲ್ಲಿ ನಮ್ಮ ಒಮ್ಮತದ ಅಭ್ಯರ್ಥಿ ಗೆಲುವಿಗೆ ಒಟ್ಟೊಟ್ಟಾಗಿ ಹೋರಾಡಬೇಕಿದೆ. ಅಲ್ಲಿನ ಪರಿಸ್ಥಿತಿಗೆ ನಾವು ಒಂದು ಎರಡು ವೋಟನ್ನೂ ಹಾಕಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.

ಚುನಾವಣಾ ದಾಳಿ:

ಪುಲ್ವಾಮಾ ದಾಳಿ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದು ಚುನಾವಣಾ ದಾಳಿ ಎಂದ ಡಿ.ಕೆ ಸುರೇಶ್, ಪಾಕಿಸ್ತಾನ ವಿರುದ್ಧದ ಹೋರಾಟಕ್ಕೆ ದೇಶದ ಪ್ರತಿಯೊಬ್ಬರ ಸಹಕಾರ ಇದ್ದೇ ಇದೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿಯೂ ಯುದ್ಧ, ದಾಳಿ‌ಗಳು ನಡೆದಿತ್ತು. ಆದರೆ ಈಗ ಅದನ್ನ ರಾಜಕೀಕರಣ ಮಾಡುವ ಕೆಲಸ ಆಗುತ್ತಿದೆ. ಇದು ಖಂಡನೀಯ ಎಂದರು.

For All Latest Updates

TAGGED:

ABOUT THE AUTHOR

...view details