ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕದನ ದಿನೇ ರಂಗು ಪಡೆಯುತ್ತಿದ್ದು, ರೇಷ್ಮೆ ನಗರಿ ರಾಮನಗರದಲ್ಲೂ ಮಂಡ್ಯ ಹೈವೊಲ್ಟೇಜ್ ಎಫೆಕ್ಟ್ ಕಾಣಿಸುತ್ತಿದೆ.
ಸುಮಲತಾಗೆ ನವ ವಧು-ವರರಿಂದ ಬೆಂಬಲ: ಕಲ್ಯಾಣ ಮಂಟಪದಲ್ಲೇ ಮತಯಾಚನೆ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಪರ ನವ ವಧು-ವರ, ಕಲ್ಯಾಣ ಮಂಟಪದಲ್ಲೇ ಮತಯಾಚನೆ ಮಾಡಿದ್ದಾರೆ.
Published : Apr 1, 2019, 11:52 PM IST
Published : Apr 1, 2019, 11:52 PM IST
|Updated : Apr 2, 2019, 10:05 AM IST
ರಾಮನಗರದಲ್ಲಿ ಸುಮಲತಾ ಪರ ನವ ವಧು-ವರ ಮತಯಾಚನೆ ಮಾಡಿದ್ದಾರೆ. ಜಿಲ್ಲೆಯ ಬಿಡದಿಯಲ್ಲಿರುವ ಎಸ್.ಪಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ರೇಷ್ಮಾ ಹಾಗೂ ವರ ನಾಗರಾಜ್ ನೂತನ ದಂಪತಿ ಸುಮಲತಾ ಪರ ವಿನೂತನವಾಗಿ ಮತಯಾಚನೆ ಮಾಡಿದ್ದಾರೆ. ಮದುವೆಗೆ ಆಗಮಿಸಿದ್ದ ಸಂಬಂಧಿಗಳು ಮತ್ತು ಸ್ನೇಹಿತರಲ್ಲಿ ಸುಮಲತಾ ಅವರಿಗೆ ವೋಟ್ ಹಾಕುವಂತೆ ಮನವಿ ಮಾಡಿದ್ದಾರೆ. ಚನ್ನಪಟ್ಟಣದ ಮಂಗಳವಾರ ಪೇಟೆ ನಿವಾಸಿಯಾದ ವರ ನಾಗರಾಜ್ ಹಾಗೂ ರೇಷ್ಮಾ ಅವರ ವಿನೂತನ ಪ್ರಯತ್ನಕ್ಕೆ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
TAGGED:
wedding hall