ರಾಮನಗರ:ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲೆಯ ಹಲವು ಗ್ರಾಮಗಳಿಂದ ಆಗಮಿಸಿದ್ದ, ರಾಸುಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಿವಿಧ ತಳಿಯ ರಾಸುಗಳು ಈ ಕಾರ್ಯಕ್ರಮಕ್ಕೆ ಬಂದಿದ್ದು, ಪ್ರದರ್ಶನ ನೀಡುವುದರ ಜೊತೆಗೆ ಕಿಚ್ಚು ಹಾಯಿಸಿ ಹಬ್ಬವನ್ನು ಆಚರಣೆ ಮಾಡಲಾಯಿತು. ಈ ಪ್ರದರ್ಶನದಲ್ಲಿ ಜಯಗಳಿಸಿದ ರಾಸುಗಳಿಗೆ ಉತ್ತಮ ಹಾಗೂ ಅತ್ಯುತ್ತಮ ರಾಸು ಎಂದು ಜಾನಪದ ಪರಿಷತ್ವತಿಯಿಂದ ಬಹುಮಾನ ಕೊಡಲಾಯಿತು.
ಪ್ರಸ್ತುತ ವಿದ್ಯಮಾನದಲ್ಲಿ ಜೆರ್ಸಿ ಹಾಗೂ ಎಚ್ಎಫ್ ಎಂಬ ವಿದೇಶಿ ತಳಿಯ ಹಸುಗಳಿಂದ ಗ್ರಾಮೀಣ ಭಾಗದ ನಾಟಿ ದನಗಳನ್ನು ಸಾಕಾಣಿಕೆ ಮಾಡುವವರ ಸಂಖ್ಯೆ ಕ್ಷೀಣಿಸಿದೆ. ನಮ್ಮ ಹಿರಿಯರು ಬಿಟ್ಟು ಹೋಗಿರುವ ಜಾನಪದ ಪರಂಪರೆಯನ್ನು ಕೇವಲ ಪ್ರದರ್ಶಿಸುವುದಲ್ಲದೆ, ಮುಂದಿನ ಪೀಳಿಗೆಗೂ ಸಹ ಅನುಕೂಲವಾಗುವಂತೆ ರೈತರು ಯುವಕರಿಗೆ ಉತ್ತೇಜನ ನೀಡಬೇಕೆಂದು ಆಯೋಜಕರು ಅಭಿಪ್ರಾಯಪಟ್ಟರು.