ರಾಮನಗರ: ಬೆಸ್ಕಾಂ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ರಾಮನಗರ ತಾಲೂಕಿನ ಬುರಗಮರದದೊಡ್ಡಿ ಗ್ರಾಮದಲ್ಲಿನ ಹಲವು ಮನೆಗಳಲ್ಲಿ ಸುಮಾರು 40 ಕ್ಕೂ ಹೆಚ್ಚು, ಟಿವಿ, 20 ಫ್ರಿಡ್ಜ್, 20 ಕ್ಕೂ ಹೆಚ್ಚು ಫ್ಯಾನ್ ಗಳು ಏಕಾಏಕಿ ಹಾನಿಗೊಳಗಾಗಿವೆ.
ಬೆಸ್ಕಾಂ ಇಲಾಖೆ ಅಧಿಕಾರಿಗಳ ಪ್ರಮಾದ ಆರೋಪ: ಹೈವೋಲ್ಟೇಜ್ನಿಂದ ಟಿವಿ, ಫ್ರಿಡ್ಜ್, ಫ್ಯಾನ್ಗಳಿಗೆ ಹಾನಿ - highvoltage effect in ramnagar
ಹೈವೋಲ್ಟೇಜ್ ವಿದ್ಯುತ್ನಿಂದಾಗಿ ರಾಮನಗರ ತಾಲೂಕಿನ ಬುರಗಮರದದೊಡ್ಡಿ ಗ್ರಾಮದಲ್ಲಿನ ಹಲವು ಮನೆಗಳಲ್ಲಿ ಸುಮಾರು 40 ಕ್ಕೂ ಹೆಚ್ಚು, ಟಿವಿ, 20 ಫ್ರಿಡ್ಜ್, 20 ಕ್ಕೂ ಹೆಚ್ಚು ಫ್ಯಾನ್ ಗಳು ಏಕಾಏಕಿ ಹಾನಿಗೊಳಗಾಗಿವೆ.
![ಬೆಸ್ಕಾಂ ಇಲಾಖೆ ಅಧಿಕಾರಿಗಳ ಪ್ರಮಾದ ಆರೋಪ: ಹೈವೋಲ್ಟೇಜ್ನಿಂದ ಟಿವಿ, ಫ್ರಿಡ್ಜ್, ಫ್ಯಾನ್ಗಳಿಗೆ ಹಾನಿ ramnagar transformer problem](https://etvbharatimages.akamaized.net/etvbharat/prod-images/768-512-6363896-thumbnail-3x2-surya.jpg)
ಗ್ರಾಮದಲ್ಲಿನ ಟ್ರಾನ್ಸ್ಫಾರ್ಮರ್ ಬದಲಾಯಿಸುವ ಸಲುವಾಗಿ ಗ್ರಾಮಕ್ಕೆ ಬಂದಿದ್ದ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ಬದಲಿಸುವ ಸಂದರ್ಭದಲ್ಲಿ ಸರಿಯಾದ ಮುಂಜಾಗ್ರತಾಕ್ರಮ ವಹಿಸದೇ ಹೋಗಿದ್ದರಿಂದ ಹೈವೊಲ್ಟೇಜ್ ವಿದ್ಯುತ್ ಇಡೀ ಗ್ರಾಮಕ್ಕೆ ಹರಿದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಗ್ರಾಮಸ್ಥರು ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನಿಸಿದ್ರೆ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉಡಾಫೆ ಹೇಳಿಕೆ ನೀಡಿದ್ದಾರಂತೆ. ಕೆಲಕಾಲ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಗ್ರಾಮಸ್ಥರು ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.