ಕರ್ನಾಟಕ

karnataka

ETV Bharat / state

ಗೊಂಬೆನಗರಿಗೂ ಕಾಲಿಟ್ಟ ಪೌರತ್ವ ಕಿಚ್ಚು: ಚನ್ನಪಟ್ಟಣದಲ್ಲಿ ಬೃಹತ್ ಪ್ರತಿಭಟನೆ - ಚನ್ನಪಟ್ಟಣ ಕೇಂದ್ರ ಸರ್ಕಾರ ಸಿಎಬಿ ಕಾಯ್ದೆ ವಿರುದ್ಧ ಪ್ರತಿಭಟನೆ

ಚನ್ನಪಟ್ಟಣದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು, ಮೆರವಣಿಗೆಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಚಾಲನೆ ನೀಡಿದರು. ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ramanagar-channapattana-citizenship-amendment-bill-protest
ಚನ್ನಪಟ್ಟಣದಲ್ಲಿ ಪೌರತ್ವದ ಬೃಹತ್ ಪ್ರತಿಭಟನೆ

By

Published : Dec 22, 2019, 8:04 PM IST

ರಾಮನಗರ: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ರಾಜ್ಯದಲ್ಲೂ ಕಾಯ್ದೆ ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದ್ದು ಬೊಂಬೆನಗರಿಯಲ್ಲೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಲಾಯಿತು.

ಜಿಲ್ಲೆಯ ಚನ್ನಪಟ್ಟಣದಲ್ಲೂ ಪೌರತ್ವದ ಕಿಚ್ಚು ಜೋರಾಗಿದ್ದು, ನಗರದ ಶೇರು ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮೆರವಣೆಗೆಗೆ ಮಾಜಿ ಸಚಿವ ಜಮೀರ್​ ಆಹಮ್ಮದ್​ ಚಾಲನೆ ನೀಡಿದರು. ನಾಯಕರು, ಮುಖಂಡರು ಕೈಗೆ ಕಪ್ಪು ಪಟ್ಟಿ ಕಟ್ಟಿ ಕಾಯ್ದೆ ವಿರೋಧಿಸಿದರು.

ಚನ್ನಪಟ್ಟಣದಲ್ಲಿ ಪೌರತ್ವದ ಬೃಹತ್ ಪ್ರತಿಭಟನೆ

ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ಕೂಲ್​ ಆವರಣದಲ್ಲೇ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್​ ಅವರಿಗೆ ಮನವಿ ಸಲ್ಲಿಸಲಾಯಿತು.

For All Latest Updates

TAGGED:

ABOUT THE AUTHOR

...view details