ಕರ್ನಾಟಕ

karnataka

ಕ್ವಾರಂಟೈನ್​ ಕೇಂದ್ರ​ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ: ಬೇಲಿ ಹಾಕಿ ಪ್ರತಿಭಟನೆ

By

Published : Jun 20, 2020, 1:57 PM IST

ರಾಮನಗರ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದ್ದ ಕ್ವಾರಂಟೈನ್​ ಸೆಂಟರ್ ಅ​ನ್ನು ಕಬ್ಬಾಳು - ಸಾತನೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಬಾಯ್ಸ್ ಹಾಸ್ಟೆಲ್​ಗೆ ಸ್ಥಳಾಂತರಿಸಲು ತಾಲೂಕು ಆಡಳಿತ ನಿರ್ಧರಿಸಿದ್ದು, ಇದಕ್ಕೆ ವಿರೋಧ ಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

protest
ಬೇಲಿ ಹಾಕಿ ಪ್ರತಿಭಟನೆ

ರಾಮನಗರ: ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದ್ದ ಕ್ವಾರಂಟೈನ್ ಸೆಂಟರ್ ಅನ್ನು ಚನ್ನಪಟ್ಟಣದ ಹೌಸಿಂಗ್ ಬೋರ್ಡ್​​​​​​ನಲ್ಲಿರುವ ಬಾಯ್ಸ್ ಹಾಸ್ಟೆಲ್​​​​​ಗೆ ಸ್ಥಳಾಂತರಿಸುವ ಹಿನ್ನೆಲೆ, ಸ್ಥಳೀಯರಲ್ಲಿ ಆತಂಕ ಮೂಡಿದ್ದು, ‌ರಸ್ತೆಗೆ ಬೇಲಿ ಹಾಕಿ ಪ್ರತಿಭಟನೆ‌ ನಡೆಸಿದ್ದಾರೆ.

ಕಬ್ಬಾಳು - ಸಾತನೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ಬಾಯ್ಸ್ ಹಾಸ್ಟೆಲ್​​​​​​ನ‌ ಅಕ್ಕಪಕ್ಕದಲ್ಲಿ‌‌ ಹಲವಾರು ಮನೆಗಳಿವೆ. ಆದ್ದರಿಂದ ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಸೆಂಟರ್ ಮಾಡುವ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಕ್ವಾರಂಟೈನ್ ಸೆಂಟರ್ ಇತ್ತು. ಆದರೆ, ಈಗ ಏಕಾಏಕಿ ನಗರದ ಮಧ್ಯ ಭಾಗದಲ್ಲಿನ ಮಹದೇಶ್ವರ ದೇವಸ್ಥಾನದ ಬಳಿಯ ಬಾಯ್ಸ್ ಹಾಸ್ಟೆಲ್​​​​​ಗೆ ಶಿಫ್ಟ್ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.

ಈ ಹಾಸ್ಟೆಲ್ ಸುತ್ತಲು ಮನೆಗಳಿವೆ. ಪುಟ್ಟ ಮಕ್ಕಳು, ಗರ್ಭಿಣಿಯರಿದ್ದಾರೆ, ಇಲ್ಲಿಗೆ ಸ್ಥಳಾಂತರ ‌ಮಾಡಬಾರದು ಎಂದು ಆಗ್ರಹಿಸಿ ದೇವಸ್ಥಾನದ ಮುಖ್ಯದ್ವಾರಕ್ಕೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಬಗ್ಗೆ ಚನ್ನಪಟ್ಟಣ ತಹಶೀಲ್ದಾರ್, ರಾಮನಗರ ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details