ಕರ್ನಾಟಕ

karnataka

ETV Bharat / state

ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ: ಸಿಪಿವೈಗೆ ಟಾಂಗ್ ನೀಡಿದ ಸಂಸದ ಡಿಕೆಸು - ಸಚಿವ ಸಿ.ಪಿ‌.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್

ವಿಜಯೇಂದ್ರ ಜೊತೆ ಸರ್ಕಾರ ತರಲು ಪ್ಲ್ಯಾನ್ ಮಾಡಿದವರು ಯಾರು..? ದೆಹಲಿಗೆ ಹೋದವರು ಯಾರು, ಶಾಸಕರಿಗೆ ಹಣ ಕೊಟ್ಟೋರು ಯಾರು..? ಎಲ್ಲಾ ಮಾಹಿತಿ ಅವರ ಬಳಿಯೇ ಇದೆ, ಅದರ ಬಗ್ಗೆ ಮಾತನಾಡಲಿ..

mp-dk-suresh-talk-about-cp-yogeswar-statement-issue
ಸಿಪಿವೈಗೆ ಟಾಂಗ್ ನೀಡಿದ ಸಂಸದ ಡಿಕೆಸು

By

Published : May 30, 2021, 10:34 PM IST

ರಾಮನಗರ :ಮೂರು ಪಕ್ಷದ ಸರ್ಕಾರ ಇದೇ ರಾಜ್ಯದಲ್ಲಿ ಎಂಬ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ, ಅವರು ಎಲ್ಲಾ ಪಾರ್ಟಿ ನೋಡಿದ್ದರಲ್ಲ ಅದಕ್ಕೆ ಹೇಳಿದ್ದಾರೆ ಎಂದು ಸಚಿವ ಸಿ.ಪಿ‌.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.

ಸಿಪಿವೈಗೆ ಟಾಂಗ್ ನೀಡಿದ ಸಂಸದ ಡಿಕೆಸು

ಓದಿ: ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ.. ಅರ್ಧಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಸಚಿವ

ರಾಮನಗರ ಜಿಲ್ಲೆ ಬಿಡದಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಜೊತೆಗೆ ಡಿಕೆಶಿ ರಾಜಕೀಯ ಒಪ್ಪಂದ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ವಿಜಯೇಂದ್ರ ಜೊತೆ ಸರ್ಕಾರ ತರಲು ಪ್ಲ್ಯಾನ್ ಮಾಡಿದವರು ಯಾರು..? ದೆಹಲಿಗೆ ಹೋದವರು ಯಾರು, ಶಾಸಕರಿಗೆ ಹಣ ಕೊಟ್ಟೋರು ಯಾರು..? ಎಲ್ಲಾ ಮಾಹಿತಿ ಅವರ ಬಳಿಯೇ ಇದೆ, ಅದರ ಬಗ್ಗೆ ಮಾತನಾಡಲಿ ಎಂದರು.

ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ, ಅವಶ್ಯಕತೆ ಇಲ್ಲ. ಏನೋ ಒಂದು ಕೆಲಸ ಕೊಟ್ಟಿದ್ದಾರೆ, ಮಂತ್ರಿ ಮಾಡಿದ್ದಾರೆ. ಮೊದಲು ಆ ಯೋಗ್ಯತೆಯನ್ನ ಉಳಿಸಿಕೊಂಡು ಹೋಗಲಿ ಎಂದು ಸಲಹೆ ಕೊಟ್ಟರು.

ಇನ್ನು, ರಾಮನಗರ ಜಿಲ್ಲೆಯಲ್ಲಿ ಹೆಚ್​​ಡಿಕೆ-ಡಿಕೆಶಿ ಪಾರುಪತ್ಯ ಎಂಬ ಹೇಳಿಕೆ ಸಂಬಂಧ ಅದನ್ನ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಬಳಿ ಕೇಳಲಿ. ಜಿಲ್ಲೆಯಲ್ಲಿ ಯಾರ ಅಧಿಕಾರ ನಡೆಯುತ್ತಿದೆ ಎಂದು ಕೇಳಲಿ. ಸದ್ಯಕ್ಕೆ ನಾವು ಎಲ್ಲರಿಂದಲೂ ದೂರ ಇದ್ದೇವೆ ಎಂದು ಇದೇ ವೇಳೆ ಡಿ.ಕೆ.ಸುರೇಶ್ ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕಿಡಿ :ಲಾಕ್​ಡೌನ್‌ನಿಂದ ಬಡವರು ಕೂಲಿ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಕೂಡಲೇ ಸರ್ಕಾರ ಬಡವರ ಕಡೆ ಹೆಚ್ಚು ಗಮನ ಹರಿಸಬೇಕು. ಈಗ ಇವರೇನು ಕಿತ್ತು ಹಾಕೋದು ಏನು ಇಲ್ಲ, ಇವರ ಎಲ್ಲಾ ಯೋಜನೆಗಳನ್ನ ಸದ್ಯಕ್ಕೆ ನಿಲ್ಲಿಸಲಿ, ಬಡವರಿಗೆ ನೆರವಾಗಲಿ ಎಂದರು.

ಇನ್ನು, ಕೇಂದ್ರ ಸರ್ಕಾರ ವ್ಯಾಕ್ಸಿನ್ ವಿಚಾರದಲ್ಲಿ ದಂಧೆ ಮಾಡುತ್ತಿದೆ. ಕೇಂದ್ರಕ್ಕೆ ಒಂದು ಬೆಲೆ, ಕೇಂದ್ರದಿಂದ ರಾಜ್ಯಕ್ಕೆ ವ್ಯಾಕ್ಸಿನ್ ಬಂದರೆ ಒಂದು ಬೆಲೆ ಇದೆ. ಇನ್ನು, ಖಾಸಗಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ದಂಧೆ ನಡೆಯುತ್ತಿದೆ ಎಂದು ಇದೇ ವೇಳೆ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ABOUT THE AUTHOR

...view details