ಕರ್ನಾಟಕ

karnataka

ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

By

Published : Jan 3, 2022, 4:51 PM IST

Updated : Jan 3, 2022, 6:45 PM IST

'ಯಾರಪ್ಪ ಅದು ಗಂಡು? ಸಿಎಂ ನಮ್ಮ ಜಿಲ್ಲೆಗೆ ಬಂದಿರುವಾಗ ಗಲಾಟೆ ಮಾಡೋನು. ನಾವು ಜಿಲ್ಲೆಗೆ ಬಂದಿರುವುದು ಅಭಿವೃದ್ಧಿ ಮಾಡೋದಕ್ಕೆ ರಾಜಕೀಯ ಮಾಡಲು ಅಲ್ಲ. ಏನೋ ಇಬ್ಬರು ಮೂವರು ಸಂಘ ಕಟ್ಟಿಕೊಂಡು ಬಂದು ಕಾರ್ಯಕ್ರಮದಲ್ಲಿ ಗಲಾಟೆ ಮಾಡೋನು ಗಂಡಲ್ಲ' ಎಂಬ ಸಚಿವ ಡಾ.ಅಶ್ವತ್ಥ್‌ನಾರಾಯಣ್ ಅವರ ಹೇಳಿಕೆ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕೆರಳಿಸಿದೆ ಎನ್ನಲಾಗುತ್ತಿದೆ.

Minister Dr.C N Ashwath Narayana and mp DK Suresh clash in Ramnagar
ವೇದಿಕೆಯಲ್ಲೇ ಜಟಾಪಟಿ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ..?

ರಾಮನಗರ: ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಚಿವ ಡಾ.ಅಶ್ವತ್ಥ್‌ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್‌ ನಡುವೆ ದೊಡ್ಡ ಜಟಾಪಟಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

ಸಚಿವರು ಹೇಳಿದ್ದೇನು?

'ಯಾರಪ್ಪ ಅದು ಗಂಡು?, ಸಿಎಂ ನಮ್ಮ ಜಿಲ್ಲೆಗೆ ಬಂದಿರುವಾಗ ಗಲಾಟೆ ಮಾಡೋನು. ನಾವು ಜಿಲ್ಲೆಗೆ ಬಂದಿರುವುದು ಅಭಿವೃದ್ಧಿ ಮಾಡೋದಕ್ಕೆ ರಾಜಕೀಯ ಮಾಡಲು ಅಲ್ಲ. ಏನೋ ಇಬ್ಬರು, ಮೂವರು ಸಂಘ ಕಟ್ಟಿಕೊಂಡು ಬಂದು ಕಾರ್ಯಕ್ರಮದಲ್ಲಿ ಗಲಾಟೆ ಮಾಡೋನು ಗಂಡಲ್ಲ' ಎಂದು ಸಚಿವ ಡಾ.ಅಶ್ವತ್ಥ್‌ ನಾರಾಯಣ್ ಹೇಳಿದರು.

ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

ಹೀಗೆ ಸಚಿವರು ವೇದಿಕೆಯ ಡಯಾಸ್‌ ಬಳಿ ನಿಂತು ಮಾತನಾಡುತ್ತಿದ್ದಂತೆ ಅದೇ ವೇದಿಕೆ ಮೇಲೆ ಕುಳಿತಿದ್ದ ಡಿ.ಕೆ.ಸುರೇಶ್‌ ಏಕಾಏಕಿ ಸಚಿವರ ಮಾತಿಗೆ ಗರಂ ಆಗಿ ಎದೆಯುಬ್ಬಿಸಿಕೊಂಡು ಬಂದರು. ಇದು ಕೈ‌ ಕೈ ಮಿಲಾಯಿಸುವ ಹಂತ ತಲುಪಿತು. ಪರಿಷತ್‌ ಸದಸ್ಯ ರವಿ ಸಚಿವರ ಮೈಕ್ ಕಿತ್ತು ಹಾಕಿದರು. ಈ ವೇಳೆ ಮಧ್ಯಪ್ರವೇಶಿದ ಪೊಲೀಸರು ಇಬ್ಬರು ನಾಯಕರ ಜಗಳ ಬಿಡಿಸುವ ಪ್ರಯತ್ನ ಮಾಡಿದರು. ಇದಾದ ನಂತರ ವೇದಿಕೆಯಲ್ಲೇ ಕುಳಿತ ಡಿ.ಕೆ.ಸುರೇಶ್, ಎಂಎಲ್‌ಸಿ ರವಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:VIDEO: ಸಿಎಂ ಎದುರೇ ಸಚಿವ ಅಶ್ವತ್ಥ ನಾರಾಯಣ​ - ಸಂಸದ ಡಿಕೆ ಸುರೇಶ್​ ಜಟಾಪಟಿ..ವೇದಿಕೆಯಲ್ಲೇ ಬೆಂಬಲಿಗರ ಬಿಗ್​ ಫೈಟ್​!

Last Updated : Jan 3, 2022, 6:45 PM IST

TAGGED:

ABOUT THE AUTHOR

...view details