ಕರ್ನಾಟಕ

karnataka

ETV Bharat / state

ಎಸಿಬಿ ಕುಂದು-ಕೊರತೆ ಸಭೆಗೆ ಸಾರ್ವಜನಿಕರ ಕೊರತೆ - ರಾಮನಗರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸಭೆ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಸಿಬಿ ಹಮ್ಮಿಕೊಂಡಿದ್ದ ಸಾರ್ವಜನಿರಕ ಕುಂದು-ಕೊರತೆ ಸಭೆಯಲ್ಲಿ ಸಾರ್ವಜನಿಕರ ಕೊರತೆ ಎದ್ದು ಕಾಣುತಿತ್ತು.

lack-of-public-at-acb-meeting-in-ramnagar
http://10.10.50.85:6060///finalout4/karnataka-nle/finalout/20-December-2019/5432335_rmn.mp4

By

Published : Dec 20, 2019, 10:57 AM IST

ರಾಮನಗರ: ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಗೆ ಸಾರ್ವಜನಿಕರ ಕೊರತೆ ಎದ್ದು ಕಾಣುತಿತ್ತು. ಒಟ್ಟಾರೆ ಸಭೆಯಲ್ಲಿ ಮೂವರು ಸಾರ್ವಜನಿಕರ ಅಹವಾಲು ಸಲ್ಲಿಕೆಯಾಗಿವೆ.

ಎಸಿಬಿ ಕುಂದು-ಕೊರತೆ ಸಭೆ

ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಕುರಿತು ಜನರಿಗೆ ಮಾಹಿತಿ ಇಲ್ಲದೇ ಇರುವುದು ಅಥವಾ ಪ್ರಚಾರದ ಕೊರತೆ ಹಿನ್ನೆಲೆ ಸಭೆಗೆ ಸಾರ್ವಜನಿಕರ‌ ಸ್ಪಂದನೆ‌ ಕಡಿಮೆಯಾಗಿತ್ತು.

ಅಧಿಕಾರಿಗಳು ಸೇರಿ 12 ಜನರು ಭಾಗಿಯಾಗಿದ್ದರು. ಎಸಿಬಿ ಇನ್ಸ್​ಪೆಕ್ಟರ್​​ ಸತ್ಯನಾರಾಯಣಸ್ವಾಮಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಲೋಕೇಶ್ ಇದ್ದರು.

ABOUT THE AUTHOR

...view details