ಕರ್ನಾಟಕ

karnataka

ETV Bharat / state

ಎಸ್‌ ಟಿ ಸೋಮಶೇಖರ್ ಎಂದರೆ ನಮಗೆ ವಿಶೇಷ: ಗೃಹ ಸಚಿವ ಜಿ ಪರಮೇಶ್ವರ್ - ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ

ರಾಮನಗರ ಜಿಲ್ಲೆ ಕುಂಬಳಗೂಡಿನಲ್ಲಿ ನೂತನ ಪೊಲೀಸ್ ಠಾಣೆಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಚಾಲನೆ ನೀಡಿದರು.

ಗೃಹ ಸಚಿವ ಜಿ ಪರಮೇಶ್ವರ್
ಗೃಹ ಸಚಿವ ಜಿ ಪರಮೇಶ್ವರ್

By ETV Bharat Karnataka Team

Published : Nov 15, 2023, 5:56 PM IST

ಗೃಹ ಸಚಿವ ಜಿ ಪರಮೇಶ್ವರ್

ರಾಮನಗರ :ಎಸ್‌ ಟಿ ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಹಳೆಯ ಸ್ನೇಹಿತರು. ಹಿಂದೆ ನಾವಿಬ್ಬರು ಒಂದೇ ಪಕ್ಷದಲ್ಲಿದ್ದೆವು. ಅವರು ಹಿಂದೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಕುಂಬಳಗೂಡಿನಲ್ಲಿ‌ ನೂತನ ಪೊಲೀಸ್ ಠಾಣೆಗೆ ಚಾಲನೆ ನೀಡಿ, ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು. ಕುಂಬಳಗೂಡು ಎಸ್‌ ಟಿ ಸೋಮಶೇಖರ್ ಅವರ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಕೆಲಸ. ಯಾರಿಗೆ ಹೇಗೆ ಬೇಕೊ ಹಾಗೆ ಆರೋಪ ಮಾಡಿಕೊಳ್ಳಲಿ. ಮುನಿರತ್ನ ಅವರು ಕೇಳಿದರೆ ಅವರಿಗೂ ಅನುದಾನ ಕೊಡುತ್ತೇವೆ ಎಂದರು.

ಅದರಲ್ಲೂ ಎಸ್‌ ಟಿ ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಸ್ನೇಹಿತರು, ಹಿಂದೆ ಒಂದೇ ಪಕ್ಷದಲ್ಲಿದ್ದೆವು. ಅವರು ಪಕ್ಷಕ್ಕೆ ಬಂದರೆ ನಿಮಗೆ ಹೇಳಿಯೇ ಪಕ್ಷದ ಶಾಲು ಹಾಕುತ್ತೇವೆ. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ನಮ್ಮ ಸಿಎಂ ಇದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಬಿಜೆಪಿಗೆ ಆನೆ ಬಲ ಬಂದಿದೆಯೋ, ಒಂಟೆಬಲ ಬಂದಿದೆಯೋ ನಮಗೆ ಗೊತ್ತಿಲ್ಲ. ನಾವ್ಯಾಕೆ ಬೇರೆ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡೋದು. ಮೊದಲು ವಿಜಯೇಂದ್ರ ಅವರು ಅಧಿಕಾರ ನಿಭಾಯಿಸಲಿ. ಆ ಮೇಲೆ ವಿಶ್ಲೇಷಣೆ ಮಾಡೋಣ ಎಂದು ಹೇಳಿದರು.

ಪರಮೇಶ್ವರ್ ಸಿಎಂ ಆಗ್ತಾರಾ? ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ನಾವು ಸಿಎಂ ಆಗಲಿ ಎಂಬುವವರ ಬಗ್ಗೆ ಏನೂ ಮಾತನಾಡಲ್ಲ. ಮುಖ್ಯಮಂತ್ರಿ ಪದವಿ ಬಗ್ಗೆ ಎಲ್ಲಿಯೂ ಹೇಳಿಕೆ ನೀಡುವುದಿಲ್ಲ. ಅಂತಹ ಪ್ರಶ್ನೆಯನ್ನು ಕೇಳಬೇಡಿ ಎಂದು ಇದೇ ವೇಳೆ ತಿಳಿಸಿದರು.

ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ : ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಎಲ್ಲ ಠಾಣೆಗಳಲ್ಲಿ ನಡೆಯುವ ಕೆಲಸವನ್ನು ಕಮಾಂಡ್ ಸೆಂಟರ್ ಮೂಲಕ ವೀಕ್ಷಿಸುವ ಕಾರ್ಯ ಆಗಲಿದೆ ಎಂದು ಗೃಹಸಚಿವ ಡಾ‌ ಜಿ ಪರಮೇಶ್ವರ್ ಅವರು (ಅಕ್ಟೋಬರ್ 29-2023) ಹೇಳಿದ್ದರು.

ಮಂಗಳೂರು ನಗರದ ವಾಮಂಜೂರಿನಲ್ಲಿ‌ ಮಂಗಳೂರು ಗ್ರಾಮಾಂತರ ಠಾಣೆ ಉದ್ಘಾಟನೆ ಮಾಡಿ ಮಾತನಾಡಿದ್ದ ಅವರು, "ಪೊಲೀಸ್ ಠಾಣೆಗೆ ಬಂದು ಹೋದವರು ಯಾರು, ಪ್ರತೀ ದೂರುಗಳು ಎಫ್ಐಆರ್ ಆಗಿದೆಯೇ?, ಇಲ್ಲವೋ?, ದೂರು ನೀಡಲು ಬಂದವರಿಗೆ ಸರಿಯಾದ ಸ್ಪಂದನೆ ದೊರಕಿದೆಯೇ ಎಂಬಿತ್ಯಾದಿ ವಿಚಾರಗಳನ್ನು ಕಮಾಂಡ್ ಸೆಂಟರ್​ನಿಂದ ಸೂಕ್ಷ್ಮವಾಗಿ ಪರಿಶೀಲಿಸುವ ಕಾರ್ಯವು ಆಗಲಿದೆ. ಒಂದು ಠಾಣೆಯಲ್ಲಿ ಪ್ರತೀ ಕ್ಷಣದಲ್ಲಿ ಏನು ಆಗುತ್ತಿದೆ ಎಂಬುದನ್ನು ನೋಡುವಂತಹ ರೀತಿಯಲ್ಲಿ ಈ ಕಮಾಂಡ್ ಸೆಂಟರ್ ನಿರ್ಮಾಣವಾಗಲಿದೆ" ಎಂದು ವಿವರಿಸಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

ABOUT THE AUTHOR

...view details