ಕರ್ನಾಟಕ

karnataka

ETV Bharat / state

FBನಲ್ಲಿ ಫ್ರೆಂಡ್​​ ಆಗುವ ಮುನ್ನ ಯೋಚಿಸಿ; ವಂಚಕರಿದ್ದಾರೆ ಹುಷಾರು! - ಕಗ್ಗಲಿಪುರ ಪೊಲೀಸ್ ಠಾಣೆ

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡ್ಕೊಂಡು ಹನಿ‌ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

ಹನಿ‌ಟ್ರ್ಯಾಪ್ ಮಾಡುತ್ತಿದ್ದ ತಂಡದ ಬಂಧನ

By

Published : Sep 14, 2019, 5:34 PM IST

ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿಕೊಂಡು ಹನಿ‌ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ಕಗ್ಗಲಿಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸುರೇಶ್, ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿ ರಂಜಿತ ಹಾಗೂ ಆಕೆಯ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:

ಫೇಸ್​​ಬುಕ್​ನಲ್ಲಿ ರಂಜಿತ ಎಂಬುವವರು ನಾನು ಟಿವಿ ವಾಹಿನಿಯ ಸುದ್ದಿಗಾರ್ತಿ ಎಂದು ನಕಲಿ ಅಕೌಂಟ್​ ಕ್ರಿಯೇಟ್​ ಮಾಡಿಕೊಂಡಿದ್ದಾಳೆ. ಈಕೆಗೆ ಕಳೆದ ಮೂರು ತಿಂಗಳ ಹಿಂದೆ ಹುಬ್ಬಳ್ಳಿ ಮೂಲಕ ಆರ್​ಟಿಐ ಕಾರ್ಯಕರ್ತ ಶಿವಕುಮಾರ್​ ಫೇಸ್​ಬುಕ್​ನಲ್ಲಿಯೇ ಪರಿಚಯವಾಗಿದ್ದಾನೆ.

ಇವರ ಪರಿಚಯ ದಿನಗಳೆದಂತೆ ಸಲುಗೆಗೆ ತಿರುಗಿ ಪರಸ್ಪರ ಮೊಬೈಲ್​ ಸಂಖ್ಯೆಗಳ ವಿನಿಮಯವಾಗಿದೆ. ಹೀಗೆ ಒಂದಿನ ರಂಜಿತ, ಶಿವಕುಮಾರ್​ನನ್ನು ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಲ್ಲಿಯಲ್ಲಿರುವ ಸಿಯಾನ್ ರೆಸ್ಟೋ ಕೆಫೆಗೆ ಕರೆಸಿಕೊಂಡಿದ್ದಾಳೆ. ನಂತರ ಈತನ ಮೇಲೆ ರಂಜಿತ ಹಾಗು ಸಹಚರರು ಹಲ್ಲೆ ನಡೆಸಿ, ಅದನ್ನು ವಿಡಿಯೋ ಮಾಡಿದ್ದಾರೆ. ಇಷ್ಟೆ ಅಲ್ಲದೇ ಶಿವಕುಮಾರ್​​ಗೆ 5 ಲಕ್ಷ ರೂ ಕೊಡುವಂತೆ ದಬಾಯಿಸಿದ್ದಾರೆ. ಆದ್ರೆ, ಶಿವಕುಮಾರ್​ ಹಣ ಕೊಡುವುದಾಗಿ ಒಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಸದ್ಯ ಶಿವಕುಮಾರ್​ ನೀಡಿರುವ ದೂರಿನ ಆಧಾರದ ಮೇಲೆ ರಂಜಿತಾ ಹಾಗೂ ಇತರರನ್ನು ಪೊಲೀಸರು ಹುಡುಕುತ್ತಿದ್ದಾರೆ.

ABOUT THE AUTHOR

...view details