ಕರ್ನಾಟಕ

karnataka

ETV Bharat / state

ಸಿಪಿವೈ, ಅಶ್ವಥ್​ ನಾರಾಯಣ ಹೇಳಿಕೆಗೆ ಡಿ.ಕೆ.ಸುರೇಶ್​ ತಿರುಗೇಟು - undefined

ಸಂಸದ ಡಿ.ಕೆ.ಸುರೇಶ್​ಗೆ ಟಾಂಗ್​ ನೀಡಿದ್ದ ಸಿ.ಪಿ.ಯೋಗೇಶ್ವರ್​ ಮತ್ತು ಅಶ್ವಥ್ ನಾರಾಯಣಗೆ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.

ಸಂಸದ ಡಿ.ಕೆ.ಸುರೇಶ್​

By

Published : Mar 30, 2019, 7:23 AM IST

ರಾಮನಗರ : ಡಿ.ಕೆ‌. ಬ್ರದರ್ಸ್ ಬೇನಾಮಿ ಹೇಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಹೇಳಿಕೆಗೆ ಡಿಕೆ ಸುರೇಶ್​ ತಿರುಗೇಟು ನೀಡಿದ್ದು, ಕೆಲಸ ಇಲ್ಲದವರು ಏನಾದ್ರು ಒಂದು ಮಾತನಾಡುತ್ತಾರೆ. ಅವರು ಫ್ರೀಯಾಗಿದ್ದಾರೆ ಮಾತನಾಡಲಿ ಬಿಡಿ ಎಂದು ಸಿ.ಪಿ.ಯೋಗೀಶ್ವರ್​ಗೆ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಕಾರ್ಯಕರ್ತರ ಭೇಟಿ ವೇಳೆ ಮಾತನಾಡಿದ ಅವರು, ಆರೋಪ ಮಾಡುವವರು ಚುನಾವಣೆ ಬಿಟ್ಟು ಬೇರೆ ಸಮಯದಲ್ಲಿ ಆರೋಪ ಮಾಡಬೇಕು ಇದಕ್ಕೆ ಅವರ ಬಳಿ ದಾಖಲೆ ಏನಿದೆ ತಂದು ತೋರಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದ್ದಾರೆ.

ಸಂಸದ ಡಿ.ಕೆ.ಸುರೇಶ್​

ಇದೇ ವೇಳೆ ಬಿಜೆಪಿಯ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇದೆ. ಡಿ.ಕೆ.ಸುರೇಶ್ ಬಳಿ ಯಾವ ಅಭಿವೃದ್ಧಿ ಕಾರ್ಡ್ ಇದೆ ಎಂಬ ಅಶ್ವಥ್ ನಾರಾಯಣ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಸುರೇಶ್​, ಮೊದಲು ಅವರ ಅಭಿವೃದ್ಧಿ ಕಾರ್ಡ್ ತರಲಿ,ನಾನು ನನ್ನ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ತರುತ್ತೇನೆ. ಆಮೇಲೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದ್ದಾರೆ

For All Latest Updates

TAGGED:

ABOUT THE AUTHOR

...view details