ಕರ್ನಾಟಕ

karnataka

ETV Bharat / state

ಅಖಾಡಕ್ಕಿಳಿಯುವರೇ ಸಿ ಪಿ. ಯೋಗೇಶ್ವರ್​ ಮಗಳು.. ತೆರೆಮರೆಯಲ್ಲಿ ದಿಢೀರ್ ಸಭೆ

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಹಾಗೂ ಎಂ.ರುದ್ರೇಶ್  ಹೆಸರುಗಳು ಅಂತಿಮವಾಗಿ ದೆಹಲಿಗೆ ಕಳಿಹಿಸಲಾಗಿದೆಯಾದರೂ, ಯೋಗೇಶ್ವರ್ ತಮ್ಮ ಮಗಳನ್ನ ಅಖಾಡಕ್ಕೆ ಇಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ.

By

Published : Mar 18, 2019, 7:24 PM IST

ಸಿ ಪಿ ಯೋಗೇಶ್ವರ್

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ‌ಸಿ.ಪಿ.ಯೋಗೇಶ್ವರ್ ಸಂಜೆ ಕಾರ್ಯಕರ್ತರ ದಿಢೀರ್ ಸಭೆ ಕರೆದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕರ್ತರ ಸಭೆ ಮಹತ್ವ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಹಾಗೂ ಎಂ.ರುದ್ರೇಶ್ ಹೆಸರುಗಳು ಅಂತಿಮವಾಗಿ ದೆಹಲಿಗೆ ಕಳಿಹಿಸಲಾಗಿದೆಯಾದರೂ, ಯೋಗೇಶ್ವರ್ ತಮ್ಮ ಮಗಳನ್ನ ಅಖಾಡಕ್ಕೆ ಇಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಇಂದು ಚನ್ನಪಟ್ಟಣದ 5 ನೇ ಕ್ರಾಸ್​ನಲ್ಲಿರುವ ಮನೆಯಲ್ಲಿ ಸಭೆ ಕರೆದಿದ್ದಾರೆ.

ಪ್ರಮುಖ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದು, ಸಭೆ ಹೆಚ್ಚಿನ ಮಹತ್ವ ಪಡೆದಿದೆ.ಇನ್ನೊಂದೆಡೆ ಅಂತಿಮವಾಗಿ ಟಿಕೆಟ್ ಘೋಷಣೆ ಬಳಿಕ ಕಾರ್ಯೋನ್ಮುಖರಾಗುವ‌ ಸಿದ್ಧತಾ ಸಭೆ ಇದಾಗಿದೆ ಎನ್ನಲಾಗುತ್ತಿದೆ.

ABOUT THE AUTHOR

...view details