ಕರ್ನಾಟಕ

karnataka

By

Published : Jan 4, 2020, 9:08 PM IST

ETV Bharat / state

ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್​ನಿಂದ ಸಿಎಎ ವಿರೋಧ: ಯೋಗೇಶ್ವರ್

ರಾಮನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ ನಡೆಯಿತು.

ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ, ramanagar rally to support CAA
ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ

ರಾಮನಗರ: ಕಾಂಗ್ರೆಸ್​​ನವರು ಸ್ವಾರ್ಥ ಸಾಧನೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ‌ ವಿರೋಧಿಸುತ್ತಿದ್ದಾರೆ. ಈ ಕಾಯ್ದೆಯಿಂದ ದೇಶದ ಯಾವೊಬ್ಬ ನಾಗರಿಕನಿಗೂ ತೊಂದರೆಯಿಲ್ಲ. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ

ನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಸಿಎಎ ಬೆಂಬಲಿಸಿ‌ ನಡೆದ ರ‍್ಯಾಲಿಯಲ್ಲಿ‌ ಪಾಲ್ಗೊಂಡು ಅವರು ಮಾತನಾಡಿದರು. ಸಿಎಎಯಿಂದ ಯಾರಿಗೂ ತೊಂದರೆಯಿಲ್ಲ. ಆದರೆ, ಈ ವಿಚಾರವನ್ನ ಕಾಂಗ್ರೆಸ್​ನವರು ಕೇವಲ‌ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ‌ ದೇಶದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು‌ ಮೂಡಿಸುವ ಸಲುವಾಗಿ ಇಂದು ನಾವು ಬೀದಿಗಿಳಿದಿದ್ದೇವೆ ಎಂದರು.

ಕೆಂಪೇಗೌಡ ಸರ್ಕಲ್​​ನಲ್ಲಿ ಆರಂಭಗೊಂಡ‌ ರ‍್ಯಾಲಿಯು ಎಂ.ಜಿ.ರಸ್ತೆ ಮೂಲಕ‌ ತೆರಳಿ ಜಿಲ್ಲಾ‌ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು. ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಮೊಳಗಿದವು. ರ‍್ಯಾಲಿಯಲ್ಲಿ‌ ಜಾಗರಣಾ ವೇದಿಕೆ ಕಾರ್ಯಕರ್ತರು ರಾಷ್ಟ್ರದ್ವಜ ಹಿಡಿದು ಭಾಗವಹಿಸಿದ್ದರು. ಅಲ್ಲದೆ ಬಿಜೆಪಿ‌‌ಯ ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವು ‌ಮುಖಂಡರು ಭಾಗವಹಿಸಿದ್ದರು.

ABOUT THE AUTHOR

...view details