ಕರ್ನಾಟಕ

karnataka

By

Published : Sep 5, 2019, 8:21 AM IST

Updated : Sep 5, 2019, 10:28 AM IST

ETV Bharat / state

ಡಿಕೆಶಿ ಬಂಧನ ಹಿನ್ನೆಲೆ: ಇಂದು ರಾಮನಗರ ಬಂದ್​​​​​

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​​ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ‌ ಘಟನೆ ನಡೆಯದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ‌, ಶಾಲಾ-ಕಾಲೇಜುಗಳಿಗೆ ರಜೆ‌ ಘೋಷಿಸಿದೆ.

Ramanagar bandh,ರಾಮನಗರ ಬಂದ್​

ರಾಮನಗರ‌:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​​ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿರುವುದು

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ‌ ಘಟನೆ ನಡೆಯದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ‌, ಶಾಲಾ-ಕಾಲೇಜುಗಳಿಗೆ ರಜೆ‌ ಘೋಷಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ 3 ಮಂದಿ ಐಪಿಎಸ್, ಒಬ್ಬರು ಎಸ್ಪಿ, 10 ಡಿವೈಎಸ್ಪಿ, 30 ಮಂದಿ‌ ಇನ್ಸ್​ಪೆಕ್ಟರ್ ಸೇರಿದಂತೆ ಒಂದು ಸಾವಿರ ಪೊಲೀಸರ ಕಣ್ಗಾವಲಿನಲ್ಲಿ ಬಂದ್ ನಡೆಯುತ್ತಿದೆ. ಬಂದ್​ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್ ಬಂಕ್​ಗಳಲ್ಲಿಯೂ ಪೆಟ್ರೋಲ್ ಹಾಕುತ್ತಿಲ್ಲ. ಕೆಲವೆಡೆ ಮಾತಿನ ಚಮಮಕಿ ನಡೆದಿದೆ.

ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಾಗಿಲು‌ ಮುಚ್ಚಿದ್ದು, ಬಸ್​ಗಳು ರಸ್ತೆಗಿಳಿದಿಲ್ಲ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕೆಲವೇ ಕೆಲವು ಬಸ್​ಗಳು ಸಂಚಾರ ನಡೆಸುತ್ತಿದ್ದು, ಕೆಲಸಕ್ಕೆ ಹೋಗುವ ಮಂದಿ ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಅಪರೂಪಕ್ಕೆ ಕೆಎಸ್ಆರ್​​ಡಿಸಿ ಬಸ್​ಗಳು ನಿಲ್ದಾಣದೊಳಗೆ ಪ್ರವೇಶಿಸಿದರೂ ಪ್ರಯಾಣಿಕರಿಗೆ ನಿಲುಗಡೆ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

Last Updated : Sep 5, 2019, 10:28 AM IST

ABOUT THE AUTHOR

...view details