ಕರ್ನಾಟಕ

karnataka

ETV Bharat / state

ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ ಅಭ್ಯರ್ಥಿಯನ್ನು ಬಲಿ ತೆಗೆದುಕೊಂಡ ಡೆಡ್ಲಿ ವೈರಸ್​ - corona attack

ನಗರಸಭೆಯ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಫಲಿತಾಂಶ ಬರುವ ಒಂದು ದಿನ ಮುನ್ನವೇ ಕೊರೊನಾಗೆ ಬಲಿಯಾಗಿದ್ದಾರೆ. ಘಟನೆಯಿಂದ ಮೃತ ಕುಟುಂಬಸ್ಥರ ಹಾಗೂ ಬೆಂಬಲಿಗರ ಆಕ್ರಂದನ ಮುಗಿಲು ಮುಟ್ಟಿದೆ.

Congress candidate dies after attack corona
Congress candidate dies after attack corona

By

Published : Apr 29, 2021, 7:39 PM IST

ರಾಮನಗರ:ಫಲಿತಾಂಶ ಬರುವ ಮುನ್ನವೇ ನಗರಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲೀಲಾ ಗೋವಿಂದರಾಜ್ (42) ಎಂಬುವರು ಮಹಾಮಾರಿ ಕೋವಿಡ್​ಗೆ ಬಲಿಯಾಗಿದ್ದಾರೆ.

ನಗರಸಭೆಯ 4ನೇ ವಾರ್ಡ್​ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೀಲಾ ಗೋವಿಂದರಾಜು ಅವರಲ್ಲಿ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ನಾಳೆ (30) ರಾಮನಗರ ನಗರಸಭೆಯ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯಲಿದೆ. ಆದರೆ, ಫಲಿತಾಂಶ ಬರುವ ಒಂದು ದಿನ ಮುನ್ನವೇ ಲೀಲಾ ಅವರ ಸಾವು ಸಂಭವಿಸಿದ್ದು ಮೃತರ ಕುಟುಂಬದವರು ಸೇರಿದಂತೆ ಬೆಂಬಲಿಗರು ದುಃಖ ವ್ಯಕ್ತಪಡಿಸಿದ್ದಾರೆ. 27 ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು.

ABOUT THE AUTHOR

...view details