ರಾಮನಗರ: ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದಗೆ ಖುದ್ದು ಹಾಜರಿಯಿಂದ ವಿನಾಯ್ತಿ ನೀಡುವ ಮೂಲಕರಾಮನಗರ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
ನಿತ್ಯಾನಂದನಿಗೆ ಬಿಗ್ ರಿಲೀಫ್... ಖುದ್ದು ಹಾಜರಿಯಿಂದ ವಿನಾಯ್ತಿ ನೀಡಿದ ಕೋರ್ಟ್ - Nithyananda Swamy rape case
ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದಗೆ ಖುದ್ದು ಹಾಜರಿಯಿಂದ ವಿನಾಯ್ತಿ ನೀಡುವ ಮೂಲಕ ರಾಮನಗರ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
![ನಿತ್ಯಾನಂದನಿಗೆ ಬಿಗ್ ರಿಲೀಫ್... ಖುದ್ದು ಹಾಜರಿಯಿಂದ ವಿನಾಯ್ತಿ ನೀಡಿದ ಕೋರ್ಟ್ Nithyananda](https://etvbharatimages.akamaized.net/etvbharat/prod-images/768-512-5321597-thumbnail-3x2-chai.jpg)
ನಿತ್ಯಾನಂದ
ರಾಮನಗರ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ನಿತ್ಯಾನಂದ ಖುದ್ದು ಹಾಜರಿಗೆ ಆದೇಶಿಸಬೇಕೆಂದು ಲೆನಿನ್ ಮತ್ತು ಆರತಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ನಿತ್ಯಾನಂದ ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ನಿತ್ಯಾನಂದನ ಗೈರು ಹಾಜರಿಯಲ್ಲಿಯೇ ವಿಚಾರಣೆ ನಡೆಸಬಹುದು ಎಂದಿದ್ದು, ಹೈಕೋರ್ಟ್ ಆದೇಶ ಹಿನ್ನಲೆ ಸದ್ಯಕ್ಕೆ ನಿತ್ಯಾನಂದನಿಗೆ ಕೋರ್ಟ್ಗೆ ಹಾಜರಾಗುವಲ್ಲಿ ವಿನಾಯಿತಿ ಸಿಕ್ಕಿದೆ.
Last Updated : Dec 10, 2019, 12:03 PM IST