ಕರ್ನಾಟಕ

karnataka

ETV Bharat / state

ಏಕಾಏಕಿ ಬ್ರೇಕ್: ಬಸ್​​ನ​ ಮುಂದಿನ ಗಾಜಿನಿಂದ ಹೊರಬಿದ್ದು ಬಾಲಕಿ ಸಾವು

ಅಜ್ಜಿ ಜೊತೆ ಪ್ರಯಾಣಿಸುತ್ತಿದ್ದ 6 ವರ್ಷದ ಬಾಲಕಿ ಮೇಲೆ ಬಸ್ ಹರಿದಿದೆ. ಬಾಲಕಿ ಜೀವಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

By

Published : Jul 22, 2021, 12:35 AM IST

ಬಾಲಕಿ ಸಾವು
ಬಾಲಕಿ ಸಾವು

ರಾಮನಗರ: ಬಸ್ ಹರಿದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿ‌ನ ಹೊನ್ನಾಪುರದ ಬಳಿ ನಡೆದಿದೆ.

ಜೀವಿತಾ (6) ಮೃತ ಬಾಲಕಿ. ಬೆಂಗಳೂರಿನಿಂದ ತಮ್ಮ ಅಜ್ಜಿ ಜೊತೆ ಉಜ್ಜಿನಿಗೆ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಸ್​ನ ಟೈರ್ ಬ್ಕ್ಯಾಸ್ಟ್ ಆದ ಹಿನ್ನೆಲೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ, ಬಸ್​​ನ ಮುಂಭಾಗದ ಗಾಜಿನ ಬಳಿಯೇ ಕುಳಿತ್ತಿದ್ದ ಬಾಲಕಿ, ನಿಯಂತ್ರಣ ತಪ್ಪಿ, ಗಾಜು ಹೊಡೆದುಕೊಂಡು ಬಸ್​​ನ ಮುಂದೆ ಬಿದ್ದಿದ್ದಾಳೆ.

ಆಗ ಅದೇ ಬಸ್ ಬಾಲಕಿ ಮೇಲೆ ಹರಿದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಮಾರ್ ಹಾಗೂ ಜ್ಯೋತಿ ದಂಪತಿಯ ಏಕೈಕ ಪುತ್ರಿ ಜೀವಿತಾಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.

ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details