ರಾಮನಗರ: ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವಂತೆ ಲಾಕ್ಡೌನ್ ಮುಂದುವರೆಸಲು ರಾಜ್ಯ ಸರ್ಕಾರವನ್ನು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದರು.
ಬಿಡದಿಯಲ್ಲಿ ಇಂದು ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ರಾಮನಗರ ಹಾಗೂ ಆನೇಕಲ್ನಲ್ಲಿ ಹೂ ಬೆಳೆ ಬೆಳೆದು ರೈತರು 500 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆಂದು ಡಿ.ಕೆ.ಸುರೇಶ್ ವಿಷಾದ ವ್ಯಕ್ತಪಡಿಸಿದರು. ಕೊರೊನಾ ಎಫೆಕ್ಟ್ನಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಈಗ ದೇವಸ್ಥಾನಗಳು, ಸಮಾರಂಭಗಳು, ಮದುವೆಗಳು ನಡೆಯುತ್ತಿಲ್ಲ.