ಕರ್ನಾಟಕ

karnataka

ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಕಾಲುವೆಗೆ ಬಿದ್ದು ಸಾವು

By

Published : Oct 29, 2020, 7:22 PM IST

ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು‌. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಗೆ ಸ್ನಾನ ಮಾಡುವುದಕ್ಕೆ ತೆರಳಿದ್ದರು. ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ.

rcr
rcr

ರಾಯಚೂರು:ಮದುವೆಗೆ ಬಂದ ಇಬ್ಬರು ಯುವಕರು ಸ್ನಾನಕ್ಕೆ ತೆರಳಿದಾಗ ‌ನೀರುಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಮಸ್ಕಿ ತಾಲೂಕಿನ ಶಂಕರ್‌ನಗರ ಕ್ಯಾಂಪ್ ಬಳಿ ಈ ಘಟನೆ ಸಂಭವಿಸಿದೆ.

ಹೈದರಾಬಾದ್ ಮೂಲದ ದಯಾ(18), ಶಿವಾ(19) ನೀರುಪಾಲಾಗಿರುವ ಯುವಕರೆಂದು ಗುರುತಿಸಲಾಗಿದೆ. ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು‌. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದರು.

ಕಾಲುವೆಗೆ ಬಿದ್ದು ಸಾವು

ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಅಗ್ನಿಶಾಮಕ ಸಿಬ್ಬಂದಿ ಯುವಕರ ಶೋಧ ಕಾರ್ಯ ನಡೆಸಿದ್ದಾರೆ. ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details