ರಾಯಚೂರು:ತಲೆ ಮೇಲೆ ಲಾರಿ ಹರಿದು ಹೋದ ಪರಿಣಾಮಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಯಚೂರು: ತಲೆ ಮೇಲೆ ಲಾರಿ ಹರಿದು ಎಪಿಎಂಸಿ ಹಮಾಲಿ ಸ್ಥಳದಲ್ಲೇ ಸಾವು - Worker death at Raichur APMC
ತಲೆ ಮೇಲೆ ಲಾರಿ ಹರಿದ ಪರಿಣಾಮ ಹಮಾಲಿವೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
![ರಾಯಚೂರು: ತಲೆ ಮೇಲೆ ಲಾರಿ ಹರಿದು ಎಪಿಎಂಸಿ ಹಮಾಲಿ ಸ್ಥಳದಲ್ಲೇ ಸಾವು Worker death at Raichur APMC](https://etvbharatimages.akamaized.net/etvbharat/prod-images/768-512-8783387-thumbnail-3x2-hrss.jpg)
ರಾಯಚೂರು ಎಪಿಎಂಸಿಯಲ್ಲಿ ಹಮಾಲಿ ಸಾವು
ಎಪಿಎಂಸಿ ಹಮಾಲಿ ಸಾವು
ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಡವಾಟಿ ಗ್ರಾಮದ ನಿವಾಸಿ ಬೊಡಣ್ಣ ದೊಡ್ಡಗುಂಡಯ್ಯ ಮೃತ ವ್ಯಕ್ತಿ. ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಈತ, ಕೆಲಸ ಮುಗಿದ ಬಳಿಕ ಊರಿಗೆ ತೆರಳಲು ತಡವಾಗಿದ್ದಕ್ಕೆ ಎಪಿಎಂಸಿ ಆವರಣದ ಪ್ರಾಂಗಣದಲ್ಲಿ ಮಲಗಿದ್ದ. ಈ ವೇಳೆ ತಲೆ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾನೆ ಎಂದು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.