ಕರ್ನಾಟಕ

karnataka

ETV Bharat / state

ಲಿಂಗಸುಗೂರಲ್ಲಿ ವಾರ್ಡ್​​ ಸಂಪರ್ಕಿಸುವ ರಸ್ತೆಗಳು ಬಂದ್​​: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪೊಲೀಸ್​​ - ಸುಳ್ಳು ಸುದ್ದಿ

ಬ್ಯಾರಿಕೇಡ್​ ಹಾಕಿದ್ದರಿಂದ ಜನತೆ ಅನಗತ್ಯ ವದಂತಿ ಹಬ್ಬಿಸುತ್ತಿದ್ದಾರೆ. ಕೋವಿಡ್-19 ಪ್ರಕರಣಗಳು ವರದಿ ಅಗಿಲ್ಲ. ಶಂಕಿತರ ಸುಳಿವು ಇಲ್ಲ. ಅಂತಹ ವದಂತಿಗೆ ಕಿವಿಗೊಡದೇ ಮನೆಯಲ್ಲಿದ್ದು,ಸಹಕಾರ ನೀಡಬೇಕು ಎಂದು ಡಿವೈಎಸ್​ಪಿ ಹುಲ್ಲೂರು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ward linking Roads closed at Lingasugur: Police say not to listen to rumors
ಲಿಂಗಸುಗೂರಲ್ಲಿ ವಾರ್ಡ್​​ ಸಂಪರ್ಕಿಸುವ ರಸ್ತೆಗಳು ಬಂದ್​​: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪೊಲೀಸ್​​

By

Published : Apr 17, 2020, 10:03 PM IST

ರಾಯಚೂರು: ಇಲ್ಲಿನ ಲಿಂಗಸುಗೂರಲ್ಲಿ ಬಹುತೇಕ ವಾರ್ಡ್ ಸಂಪರ್ಕಿಸುವ ರಸ್ತೆಗಳನ್ನು ಮುಂಜಾಗೃತಾ ಕ್ರಮವಾಗಿ ಬಂದ್​ ಮಾಡಲಾಗಿದೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಡಿವೈಎಸ್​​​ಪಿ ಎಸ್​ಎಸ್​​ ಹುಲ್ಲೂರು ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಪಟ್ಟಣದ ಕೆಲ ವೃತ್ತಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಬ್ಯಾರಿಕೇಡ್​ ಹಾಕಿದ್ದರಿಂದ ಜನತೆ ಅನಗತ್ಯ ವದಂತಿ ಹಬ್ಬಿಸುತ್ತಿದ್ದಾರೆ. ಕೋವಿಡ್-19 ಪ್ರಕರಣಗಳು ವರದಿ ಅಗಿಲ್ಲ. ಶಂಕಿತರ ಸುಳಿವು ಇಲ್ಲ. ಅಂತಹ ವದಂತಿಗೆ ಕಿವಿಗೊಡದೇ ಮನೆಯಲ್ಲಿದ್ದು, ಸಹಕಾರ ನೀಡಬೇಕು ಎಂದರು.

ರಾಯಚೂರು ಜಿಲ್ಲೆ ಸುತ್ತ ಮುತ್ತಲ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬಳ್ಳಾರಿ ಸೇರಿದಂತೆ ತೆಲಂಗಾಣದ ಗಡಿ ಭಾಗದಲ್ಲಿ ಸಾಕಷ್ಟು ಪ್ರಕರಣಗಳು ವರದಿ ಆಗುತ್ತಿವೆ. ಕಾರಣ ಮುಂಜಾಗ್ರತೆ ಉದ್ದೇಶದಿಂದ ಜನತೆ ಬೀದಿಗೆ ಇಳಿಯದಿರಲಿ ಎಂದು ವಾರ್ಡ್ ಸಂಪರ್ಕ ರಸ್ತೆಗಳ ಬಂದ್ ಮಾಡಲಾಗಿದೆ. ಇದಕ್ಕೆ ಸಹಕರಿಸಬೇಕು ಎಂದರು.

ABOUT THE AUTHOR

...view details