ರಾಯಚೂರು: ಮೊಬೈಲ್ ಬಳಸುವವರು ಬೆಚ್ಚಿ ಬೀಳುವಂತ ಘಟನೆಯೊಂದು ಜಿಲ್ಲೆಯಲ್ಲಿ ಇಂದು ನಡೆದಿದೆ. ಯರಗೇರಾ ಗ್ರಾಮದಲ್ಲಿ ಯವಕನೋರ್ವ ಚಡ್ಡಿಯ ಜೇಬಿನಲ್ಲಿಟ್ಟುಕೊಂಡಿದ್ದ ಮೊಬೈಲ್ ಸ್ಫೋಟಗೊಂಡಿದೆ.
ಜೇಬಿನಲ್ಲಿ ಇಟ್ಟುಕೊಂಡಿದ್ದ ವೇಳೆ ಮೊಬೈಲ್ ದಿಢೀರ್ ಬ್ಲಾಸ್ಟ್... ಆತಂಕದಲ್ಲಿ ಯುವಕ
ಜೇಬಿನಲ್ಲಿಟ್ಟುಕೊಂಡಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿದೆ. ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಫೋನ್ ಬಳಕೆದಾರರಲ್ಲಿ ಆತಂಕ ಶುರುವಾಗಿದೆ.
ವಿವೋ ಕಂಪನಿ ಮೊಬೈಲ್ ಬ್ಲಾಸ್ಟ್
ಅರುಣಕುಮಾರ್ ಎಂಬುವರಿಗೆ ಸೇರಿದ ಮೊಬೈಲ್ ಬ್ಲಾಸ್ಟ್ ಆಗಿದ್ದು, ಆತ ಗಾಯಗೊಂಡಿದ್ದಾರೆ. ಘಟನೆ ಬಳಿಕ ಮಾತನಾಡಿರುವ ಅರುಣ್ಕುಮಾರ್ ಅವರು, ಮೊಬೈಲ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಸಲಹೆ ಸಹ ನೀಡಿದ್ದಾರೆ.
ಘಟನೆಯಿಂದ ಯುವಕ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡಿದ್ದು, ಮೊಬೈಲ್ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸ್ಫೋಟದಿಂದಾಗಿ ಗ್ರಾಮದಲ್ಲಿ ಮೊಬೈಲ್ ಬಳಸುವ ಜನರಲ್ಲೂ ಆತಂಕ ಶುರುವಾಗಿದೆ.
Last Updated : May 10, 2019, 5:21 PM IST