ಕರ್ನಾಟಕ

karnataka

By

Published : Oct 8, 2020, 8:55 PM IST

ETV Bharat / state

ಮಾಸ್ಕ್​ ಧರಿಸದೆ ಓಡಾಟ, ಸಂಚಾರಿ ನಿಯಮ ಉಲ್ಲಂಘನೆ: 426 ಪ್ರಕರಣ ದಾಖಲು...

ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಸಿಪಿಐ ಮಹಾಂತೇಶ ಸಜ್ಜನ ಹಾಗೂ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್​ ಧರಿಸದೆ ಓಡಾಡುತ್ತಿದ್ದವರು ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರ ಮೇಲೆ ಒಟ್ಟು 426 ಪ್ರಕರಣ ದಾಖಲಿಸಿ ರೂ. 48,900 ದಂಡ ವಸೂಲಿ ಮಾಡಲಾಗಿದೆ.

Raichur
ಲಿಂಗಸುಗೂರು

ಲಿಂಗಸುಗೂರು: ಮಾಸ್ಕ್​ ಧರಿಸದೆ ಓಡಾಡುತ್ತಿದ್ದವರು ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರ ಮೇಲೆ ಒಟ್ಟು 426 ಪ್ರಕರಣ ದಾಖಲಿಸಿ ರೂ. 48,900 ದಂಡ ವಸೂಲಿ ಮಾಡಲಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಸಿಪಿಐ ಮಹಾಂತೇಶ ಸಜ್ಜನ ಹಾಗೂ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್​ ಧರಿಸದವರ ಮೇಲೆ 403 ಪ್ರಕರಣ ದಾಖಲಿಸಿ ರೂ. 40,300 ದಂಡ ವಸೂಲಿ ಮಾಡಿದ್ದಾರೆ. ಹಾಗೆಯೇ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಿದವರ ಮೇಲೆ 23 ಪ್ರಕರಣ ದಾಖಲಿಸಿ ರೂ. 8,600 ದಂಡ ವಸೂಲಿ ಮಾಡಲಾಗಿದೆ.

ಮಾಸ್ಕ್​ ಧರಿಸದೆ ಓಡಾಡುತ್ತಿದ್ದವರು ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು.

ಅಲ್ಲದೇ ಸ್ಥಳೀಯ ಕಿರಾಣಿ, ಬಟ್ಟೆ, ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟು, ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನ ಸವಾರ ಮತ್ತು ಗ್ರಾಹಕರಿಗೆ ಮಾಸ್ಕ್​, ಸಂಚಾರಿ ನಿಯಮ ಪಾಲಿಸಲು ಸಿಪಿಐ ಮಹಾಂತೇಶ ಸಜ್ಜನ ಎಚ್ಚರಿಕೆ ಸಂದೇಶ ನೀಡಿದರು.

ABOUT THE AUTHOR

...view details